ಬಂಟ್ವಾಳ

ಸೀಮೆಎಣ್ಣೆ ಸೇವಿಸಿ ಬಾಲಕಿ ಸಾವು

ಬಾಟಲಿಯೊಳಗಿದ್ದ ಸೀಮೆ ಎಣ್ಣೆಯನ್ನು ಆಕಸ್ಮಿಕವಾಗಿ ಕುಡಿದ ಒಂದು ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮ ಸುಭಾಷ್ ನಗರದಲ್ಲಿರುವ ಜಲೀಲ್ ಎಂಬವರ ಪುತ್ರಿ ಆಯಿಷಾ ಜಯಿಷಾ (1.2 ವರ್ಷ) ಮೃತಪಟ್ಟ ಮಗು.

ಮೂರು ದಿನಗಳ ಹಿಂದೆ ಸಂಜೆಯ ವೇಳೆ ಜಲೀಲ್ ಅವರು ಕಾರಿನಲ್ಲಿ ಡಾಂಬರು ಅಂಟಿಕೊಂಡದ್ದನ್ನು ತೆಗೆಯುವ ಸಲುವಾಗಿ ಸೀಮೆ ಎಣ್ಣೆಯನ್ನು ತರಿಸಿ, ಕೆಲಸವಾದ ಬಳಿಕ ಉಳಿದ ಸೀಮೆ ಎಣ್ಣೆಯನ್ನು ಮನೆಯೊಳಗಿಟ್ಟಿದ್ದರು. ಬಾಟಲಿಯೊಂದರಲ್ಲಿಟ್ಟಿದ್ದ ಆ ಸೀಮೆ ಎಣ್ಣೆಯನ್ನು ಮಗು ಅಚಾನಕ್ ಆಗಿ ಬಾಯಿಗೆ ಎರೆದುಕೊಂಡು ಕುಡಿದಿದೆ. ಕೂಡಲೇ ಮನೆಯವರಿಗೆ ವಿಷಯ ಗೊತ್ತಾಗಿ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಮಂಗವಾರ ಬೆಳಗ್ಗೆ ಮಗು ಅಸು ನೀಗಿತು ಎಂದು ಬಂಟ್ವಾಳ ಪೊಲೀಸರು ತಿಳಿಸಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ