ಕಲ್ಲಡ್ಕ

ತ್ಯಾಗ, ಸಮರ್ಪಣೆಯಿಂದ ಗೋಯಾತ್ರೆ ಮಹಾಮಂಗಲ ಯಶಸ್ವಿ: ರಾಘವೇಶ್ವರ ಸ್ವಾಮೀಜಿ

ಮಹಾಮಂಗಲದ ಬಳಿಕ ಇನ್ನು ಗೋಹತ್ಯೆ ಸುಲಭವಲ್ಲ, ಗೋಘಾತುಗರು ನಿದ್ದೆಗೆಡುವಂತಾಗಿದೆ. ಗೋಯಾತ್ರೆಯ ಮಹಾಮಂಗಲ ಮೂಲಕ ಗೋರಕ್ಷೆಯ ಕಾರ್ಯಕ್ಕೆ ಬಲ ಬಂದಿದೆ. ತ್ಯಾಗ, ಸಮರ್ಪಣೆಯಿಂದ ಯಾತ್ರೆ ಯಶಸ್ವಿಯಾಗಿದೆ. ಇನ್ನು ಗ್ರಾಮ, ಗ್ರಾಮಗಳಲ್ಲಿ ಗೋದೀಕ್ಷೆ ಪಡೆದು ಗೋರಕ್ಷಕರ ಸಂಖ್ಯೆಯನ್ನು ಸಂಯೋಜನೆ ಮಾಡುವ ಕಾರ್ಯ ನಡೆಯಬೇಕು ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಸೋಮವಾರ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಮಂಗಲ ಗೋಯಾತ್ರೆಯ ಮಹಾ ಮಂಗಲದ ಅವಲೋಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಜಾಹೀರಾತು

ಸಮಾಜದಲ್ಲಿ ಪರಿವರ್ತನೆ ಹಾದಿ ತುಳಿದವರಿಗೆ ಸಂಕಷ್ಟ, ಷಡ್ಯಂತ್ರ, ಇದ್ದದ್ದೇ. ಕಾರ್ಯಕ್ರಮಗಳು ಮಳೆಯ ರೀತಿಯಲ್ಲಿ ಇದ್ದು, ಸಂಘಟನೆ ಹಾಗೂ ಕಾರ್ಯಕರ್ತರು ಹೊಳೆಯ ಹಾಗೆ ವರ್ಷಾಪೂರ್ತಿ ಹರಿಯುತ್ತಿರಬೇಕು. ಸರಿ ಎಂದು ಕಾಣುವುದನ್ನು ಮುನ್ನುಗ್ಗಿ ಮಾಡಬೇಕು ಎಂದರು.

ಜಾಹೀರಾತು

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಶಂಕರಾಚಾರ್ಯ ಪೀಠದಲ್ಲಿ ಕಳಂಕ ಬರಲು ಸಾಧ್ಯವೇ ಇಲ್ಲ. ಸಮರ್ಪಣಾ ಭಾವದಿಂದ ಪ್ರತಿಯೊಬ್ಬರೂ ತೊಡಗಿಸಿಕೊಂಡು ಗೋವಿನ ಕಾರ್ಯದಲ್ಲಿ ಸಮಾಜ ಪರಿವರ್ತನೆಗೆ ಪ್ರಯತ್ನಿಸಿದ್ದಾರೆ ಎಂದರು.

ಉತ್ತರಕಾಶಿ ಶ್ರೀಕಪಿಲಾಶ್ರಮದ ಶ್ರೀ ರಾಮಚಂದ್ರ ಗುರೂಜಿ, ಮಾಲೂರು ಶ್ರೀ ಲೋಕೇಶಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಉಪಸ್ಥಿತರಿದ್ದರು. ಹರಿಪ್ರಸಾದ್ ಪೆರಿಯಾಪು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

 

 

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ