ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ನಲ್ಲಿ ಸೇನಾ ಸೇರ್ಪಡೆ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ನಡೆಯತು.
ಮಂಗಳೂರಿನ ಸೇನಾ ನೇಮಕಾತಿ ವಿಭಾಗದ ಅಧಿಕಾರಿ ಕರ್ನಲ್ ಶ್ರೀ ಪ್ರಶಾಂತ್ ಪೇಟ್ಕರ್ ಸೇನಾ ಆಯ್ಕೆ ಪ್ರಕ್ರಿಯೆ, ಸೈನಿಕರ ಸೇವಾ ವೈಖರಿ, ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಶಾಲಾ ಪ್ರಾಂಶುಪಾಲೆ ರಮಾ ಶಂಕರ್ ಸಿ, ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎಂಟನೇ ತರಗತಿಯ ಅಬ್ದುಲ್ ಸತ್ತಾರ್ ಶಾಮಿಕ್ ಕಾರ್ಯಕ್ರಮ ನಿರ್ವಹಿಸಿದರು. ಆದಿತ್ಯ ಅಗ್ರಬೈಲು ಅತಿಥಿಗಳನ್ನು ಪರಿಚಯಿಸಿ, ರಿತಿಕಾ ಆರ್ ಶೆಟ್ಟಿ ವಂದಿಸಿದರು.