ತುಂಬೆ ಅಣೆಕಟ್ಟಿನಲ್ಲಿ 5 ಮೀಟರ್ ಎತ್ತರಕ್ಕೆ ನೀರು ಶೇಖರಣೆ ಆಗಿರುವ ಸಂದರ್ಭ ಯಾವೆಲ್ಲ ಕೃಷಿ ಭೂಮಿ ಮುಳುಗಡೆ ಆಗುತ್ತದೆ ಎಂಬ ಸರ್ವೇಯನ್ನು ಮಂಗಳೂರು ಕಮೀಷನರ್ ಅಬ್ದುಲ್ ನಜೀರ್ ಎಂಜಿನಿಯರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಸಹಿತ ಸೋಮವಾರ ನಡೆಸಿದರು.
ಈ ವೇಳೆ ಸಜೀಪಮುನ್ನೂರು ಗ್ರಾಮದಲ್ಲಿ ಸಂತ್ರಸ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ.ಕೆ , .ಸರ್ವೆಯರ್ ಗಳಾದ ರಾಘವೇಂದ್ರ, ಸುರೇಶ್, ಲೋಕೇಶ, ಗ್ರಾಮ ಕರಣಿಕರಾದ ಯೋಗಾನಂದ, ರಾಜಶೇಖರ್, ನವೀನ್.ಟಿ , ಸಿಬ್ಬಂದಿಗಳಾದ
ಸದಾಶಿವ ಕೈಕಂಬ, ನವೀನ್ , ತಿಲಕ್ ರಾಜ್ ಸಹಕರಿಸಿದರು.