ಪುಂಜಾಲಕಟ್ಟೆ

ನಾಟಕ ಸ್ಪರ್ಧೆಗೆ ಕೃತಿ, ತಂಡಗಳ ಆಯ್ಕೆ

ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ವತಿಯಿಂದ ಜ.14 ರಿಂದ ಜ.21 ರವರೆಗೆ ನಡೆಯಲಿರುವ ಕಾಸರಗೋಡು ಜಿಲ್ಲೆ ಸೇರಿದಂತೆ ಅವಿಭಜಿತ ದ.ಕ.ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಗೆ ನಾಟಕ ಕೃತಿ ಮತ್ತು ತಂಡಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಮೋಹನ್ ಸಾಲ್ಯಾನ್ ಅವರು ತಿಳಿಸಿದ್ದಾರೆ.

ಮಿತ್ರ ಮಂಡಳಿ ಸಭಾಂಗಣದಲ್ಲಿ ವಿವಿಧ ತಂಡಗಳ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಚೀಟಿ ಎತ್ತುವ ಮೂಲಕ ತಂಡಗಳಿಗೆ ಸ್ಪರ್ಧಾ ದಿನಾಂಕ ನಿಗದಿಪಡಿಸಲಾಯಿತು.

ಜ.14ರಂದು ನಾಟಕ ಸ್ಪರ್ಧೆಯ ಉದ್ಘಾಟನೆ ನಡೆಯಲಿದ್ದು ಬಳಿಕ ಪಂಚಶ್ರೀ ಕಲಾ ತಂಡ ಬಂಟ್ವಾಳ ಇವರಿಂದ ದೇವೆರ್ ತೂಪೆರ್ ನಾಟಕ,ಜ.15ರಂದು ಧರಿತ್ರಿ ಕಲಾವಿದೆರ್ ಕುಡ್ಲ ಇವರಿಂದ ನನ ಏರುಲ್ಲೆರ್ ನಾಟಕ,ಜ.16 ರಂದು ನಮ್ಮ ಕಲಾವಿದೆರ್ ನೆಲ್ಯಾಡಿ ಇವರಿಂದ ಪನ್ಪಿನಕುಲು ಪನ್ಪೆರ್ ನಾಟಕ,ಜ.17 ರಂದು ತೆಲಿಕೆದ ತೆನಾಲಿ ಕಾರ್ಲ ಇವರಿಂದ ಮದಿರೆಂಗಿ ನಾಟಕ,ಜ.18ರಂದು ಶ್ರೀ ಶಾರದ ಕುಸಲ್ದ ಕಲಾವಿದೆರ್ ರಾಯಿ ಕೊಯಿಲ ಇವರಿಂದ ಉಲಾಯಿ ಲೆಪ್ಪುಗ ನಾಟಕ, ಜ.19ರಂದು ಚೈತನ್ಯಾ ಕಲಾವಿದೆರ್ ಬಲೂರು ಇವರಿಂದ ಸ್ಟಾರ್ ನಾಟಕ,ಜ.20 ರಂದು ತುಳುವೆರೆ ಉಡಲ್ ಜೋಡುಕಲ್ಲು ಇವರಿಂದ ಮದಿಮೆ ಒಂಜಿ ಆಂಡ್‌ಗೆತ್ತಾ ನಾಟಕ,ಜ.21ರಂದು ಸಮಾರೋಪ ಸಮಾರಂಭ ನಡೆಯಲಿದ್ದು ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಮನೋರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ