ಬಂಟ್ವಾಳ: 49ನೇ ವಾರದ ಸ್ವಚ್ಛ ಭಾರತ ನಿರ್ಮಲ ಬಂಟ್ವಾಳ ಕಾರ್ಯಕ್ರಮದಡಿ ಸ್ವಚ್ಛತೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವು ಗುರುವಾರ ಗುರುವಾರ ಬೆಳಿಗ್ಗೆ 7.30 ಗೆ ಬಿ ಕಸಬಾ ಗ್ರಾಮದ ಕೆಳಗಿನ ಪೇಟೆಯಲ್ಲಿ ನಡೆಯಿತು.
ರಸ್ತೆ ಬದಿ ಶುಚಿತ್ವ ಮಾಡಿದ ಬಳಿಕ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಭಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಉದ್ದೇಶಿಸಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಮೊಹಮ್ಮದ್ ನೀಮ, ಮುಖ್ಯಾಧಿಕಾರಿ ಸುಧಾಕರ್ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದರು.
ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಉಪಾಧ್ಯಯಿನಿ ಮೆಟಿಂಡ ಡಿ’ಸೋಜ ಒಣ ಹಾಗು ಹಸಿ ಕಸದ ಬಕೆಟ್ ಗೆ ಚಾಲನೆ ನೀಡಿದರು. ಸುಮಾರು 172 ಮನೆಗಳಿಗೆ ಬಕೆಟ್ ವಿತರಿಸಲಾಯಿತು.