ನಾಟಕ

ಕಾಪಿಕಾಡ್ – ವಿಜಯಕುಮಾರ್ ಕೊಡಿಯಾಲ್ ಬೈಲ್ ಸಮಾಗಮ

ತುಳು ನಾಟಕ ಪ್ರಿಯರಿಗೆ ಸಂತಸದ ಸುದ್ದಿ.

ಇದು ತುಳು ರಂಗಭೂಮಿಯಲ್ಲೂ ಸಂಚಲನ ಮೂಡಿಸಿರುವ ವಿಚಾರ. ಪ್ರತಿಭಾವಂತ ನಿರ್ದೇಶಕರೆಂದೇ ಗುರುತಿಸಿಕೊಂಡಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತು ದೇವದಾಸ ಕಾಪಿಕಾಡ್ ಒಂದೇ ವೇದಿಕೆಯಲ್ಲಿ ಪ್ರದರ್ಶನ ನೀಡಲಿದ್ದಾರೆ.

ಇವರಿಗೆ ವೇದಿಕೆ ಒದಗಿಸಿದ್ದು, ಕೆ.ಕೆ.ಫ್ರೆಂಡ್ಸ್ ಮಂಗಳೂರು.

ಜಾಹೀರಾತು

ಮಂಗಳೂರು ಪುರಭವನ ಹಿಂದೊಮ್ಮೆ ತುಳು ನಾಟಕ ಪ್ರದರ್ಶನಕ್ಕೆ ಸಂಬಂಧಿಸಿ ಹೌಸ್ ಫುಲ್ ಆಗುತ್ತಿತ್ತು. ಮತ್ತೆ ಅದೇ ವೈಭವಕ್ಕೆ ಮರಳಲಿದೆಯಾ? ಕಾಪಿಕಾಡ್, ಕೊಡಿಯಾಲ್ ಬೈಲ್ ಅಭಿಮಾನಿಗಳಿಗೆ ಬಿಟ್ಟ ವಿಚಾರವಿದು. ಆದರೆ ನವೆಂಬರ್ 26ರಂದು ಮಂಗಳೂರು ಪುರಭವನದಲ್ಲಿ ರಾತ್ರಿ 10.30ಕ್ಕೆ ಚಾ ಪರ್ಕ ಕಲಾವಿದರ ಅಭಿನಯದ ತೆಲಿಕೆದ ಬೊಳ್ಳಿ ದೇವದಾಸ ಕಾಪಿಕಾಡ್ ರಚನೆ ನಿರ್ದೇಶನದಲ್ಲಿ ಕೊಡೆ ಬುಡ್ಪಾಲೆ ಎಂಬ ನಾಟಕ ಭೋಜರಾಜ ವಾಮಂಜೂರು ಸಮರ್ಥ ಅಭಿನಯದಲ್ಲಿ ಇಡೀ ಚಾಪರ್ಕ ತಂಡದಿಂದ ಮೂಡಿಬರಲಿದೆ. ಅದರೊಟ್ಟಿಗೆ ವಿಜಯಕುಮಾರ್ ಕೊಡಿಯಾಲ್ ಬೈಲ್ ರಚನೆ-ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರು ಅಭಿನಯಿಸುವ ತುಳುನಾಡ ರತ್ನ ದಿನೇಶ್ ಅತ್ತಾವರ ಸಹಿತ ಪ್ರಮುಖ ಕಲಾವಿದರ ಸಂಗಮದಲ್ಲಿ ತುಳು ವಿಭಿನ್ನ ಶೈಲಿಯ ಹಾಸ್ಯದ ಜೊತೆಗೆ ಸಂದೇಶಭರಿತ ನಾಟಕ ಕಡಲಮಗೆ ಪ್ರದರ್ಶನ.

ಇವೆಲ್ಲದರ ಜೊತೆಗೆ ಉಮೇಶ್ ಮಿಜಾರ್ ತಂಡದ ತೆಲಿಕೆದ ಗೊಂಚಲು, ನಿಶಾನ್ ರೈ ಅವರಿಂದ ಹಾಡುಗಾರಿಕೆ ಮನರಂಜಿಸಲಿದೆ.

ಜಾಹೀರಾತು

 

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ