ಬಂಟ್ವಾಳ: ತಾಲೂಕಿನ ಬಂಟ್ವಾಳ ಹೋಬಳಿ ಮಟ್ಟದ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮ ಸಿದ್ದಕಟ್ಟೆ ಗ್ರಾಮ ಪಂಚಾಯತಿನಲ್ಲಿ ಬುಧವಾರ ನಡೆಯಿತು.
ಸಂಗಬೆಟ್ಟು, ಕುಕ್ಕಿಪ್ಪಾಡಿ, ಅಮ್ಟಾಡಿ, ಕುರಿಯಾಳ, ಬಂಟವಾಳ ಕಸಬಾ, ರಾಯಿ, ಕೊಯ್ಲ ಗ್ರಾಮಗಳ ನಾಗರಿಕರು ಇದರ ಪ್ರಯೋಜನ ಪಡೆದರು.
ತಾಲೂಕು ಪಂಚಾಯಿತಿ ಸದಸ್ಯರಾದ ಪ್ರಭಾಕರ ಪ್ರಭು, ಪಂಚಾಯಿತಿ ಅಧ್ಯಕ್ಷರಾದ ಗುಲಾಬಿ ಶೆಟ್ಟಿ, ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ತಾಲೂಕು ಕಚೇರಿ ಉಪತಹಸೀಲ್ದಾರ್ ಭಾಸ್ಕರ ರಾವ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿಲ್ವಿಯಾ ಫೆರ್ನಾಂಡಿಸ್, ಕಂದಾಯ ನಿರೀಕ್ಷಕ ನವೀನ್ ಮೊದಲಾದವರು ಹಾಜರಿದ್ದು ಮಾರ್ಗದರ್ಶನ ನೀಡಿದರು.