ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸಮೀಪದ ಕೊಡಂಗೆ ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರೌಢಶಾಲೆ ವತಿಯಿಂದ ಮೊಡಂಕಾಪು ಇನ್ಫೆಂಟ್ ಜೀಸಸ್ ಪ್ರೌಢಶಾಲಾ ಮೈದಾನದಲ್ಲಿ ಈಚೆಗೆ ಏರ್ಪಡಿಸಿದ್ದ ವಲಯ ಮಟ್ಟದ ಕ್ರೀಡಾಕೂಟವನ್ನು ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಉದ್ಘಾಟಿಸಿದರು. ಉಪಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮುಖ್ಯಶಿಕ್ಷಕ ಭಾಸ್ಕರ ರಾವ್, ನವೀನ್ ಪಿ.ಎಸ್., ಫ್ಲೇವಿ ಕ್ರಾಸ್ತ, ಡೇನಿಸ್ ತಾವ್ರೊ, ಜೋಯೆಲ್ ಲೋಬೊ, ತಾರೇಶ ನಾಯ್ಕ್, ಜಗದೀಶ ರೈ ಮತ್ತಿತರರು ಇದ್ದರು.