ಬಂಟ್ವಾಳ: ಹೆಚ್ಚುವರಿ ಸಿವಿಲ್ ಮತ್ತು ಜೆಎಂಎ ಫ್ ಸಿ ನ್ಯಾಯಾಧೀ ಶರಾಗಿ ಆಯ್ಕೆಯಾದ ನ್ಯಾಯಾಧೀಶೆ ಪ್ರತಿಭಾ ಡಿ ಎಸ್ ರವರನ್ನು ಬಂಟ್ವಾಳ ವಕೀಲರ ಸಂಘದಿಂದ ಸ್ವಾಗತಿಸುವ ಕಾರ್ಯಕ್ರಮ ಸಂಘದ ಸಭಾಂಗಣದಲ್ಲಿ ಜರಗಿತು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಯು. , ಸಿವಿಲ್ ನ್ಯಾಯಾಧೀಶರಾದ ಮಹೇಶ್ ಆರ್., ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ, ಉಪಾಧ್ಯಕ್ಷ ಸುರೇಶ್ ಕುಮಾರ್ ನಾವೂರು, ಪ್ರಧಾನ ಕಾರ್ಯದರ್ಶಿ ರಾಜಾರಾಮ ನಾಯಕ್, ಕೋಶಾಧಿಕಾರಿ ವೀರೇಂದ್ರ ಜೈನ್, ವಕೀಲರುಗ ಳಾದ ನಿರ್ಮಲ , ಕೇಶವಿ ಗಿರೀಶ್, ಸತೀಶ್ ಕುಮಾರ್ ಶಿವಗಿರಿ ಮತ್ತಿತರರು ಉಪಸ್ಥಿತರಿದ್ದರು.