ಬಂಟ್ವಾಳ

ಅಯ್ಯಪ್ಪ ಭಕ್ತವೃಂದದಿಂದ ಅಕ್ಕಿ ವಿತರಣಾ ಕಾರ್ಯ

ಬಂಟ್ವಾಳ: ಅಯ್ಯಪ್ಪ ವೃತಧಾರಿ ಬೆಂಗಳೂರಿನ ವರದರಾಜ ಗುರುಸ್ವಾಮಿ ಶ್ರದ್ಧಾಂಜಲಿ ಪ್ರಯುಕ್ತ ಅವರ ಭಕ್ರವೃಂದದಿಂದ ಅಕ್ಕಿ ವಿತರಣಾ ಕಾರ್ಯಕ್ರಮ ಗುರುವಾರ ಬೋಳಂತೂರಿನ ತುಳಸಿವನ ಸಿದ್ಧಿ ವಿನಾಯಕ ಭಜನಾ ಮಂದಿರ ವಠಾರದಲ್ಲಿ ನಡೆಯಿತು.

ಈ ಸಂಬಂಧ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ನೇಮಿರಾಜ ಶೆಟ್ಟಿ, ವಿಶ್ವಸ್ಥ ಮಂಡಳಿ ಅಧ್ಯಕ್ಷ ವೆಂಕಟರಮಣ ಬಳ್ಕೂರಾಯ, ನಿವೃತ್ತ ಶಿಕ್ಷಕ ಶಂಕರ ವಿ, ಪ್ರಮುಖರಾದ ಮುತ್ತಪ್ಪ ಮೂಲ್ಯ, ಸಿದ್ಧಿ ವಿನಾಯಕ ಭಜನಾ ಮಂದಿರದ ಅಧ್ಯಕ್ಷ ಸಂಕಪ್ಪ ಮೂಲ್ಯ, ಸದಸ್ಯ ಭಾಸ್ಕರ ಕಯ್ಯ, ಉದಯ ಕುಮಾರ್ ತುಳಸೀವನ, ನಾರಯಾಣ ಮೂಲ್ಯ ಹಾಜರಿದ್ದು ಸಂತಾಪ ಸೂಚಿಸಿದರು.

ಬಳಿಕ ಸ್ಥಳೀಯ ಬಡವರ್ಗದ ಜನರಿಗೆ ತಲಾ 25 ಕೆ.ಜಿ.ಯಂತೆ ಅಕ್ಕಿಯನ್ನು ಅತಿಥಿಗಳು ವಿತರಿಸಿದರು. ಗುರುಸ್ವಾಮಿಯವರು ಬೆಂಗಳೂರಿನಲ್ಲಿ ವಾಸ್ತವ್ಯವಿದ್ದರೂ ಅಯ್ಯಪ್ಪ ವೃತಧಾರಿಗಳಾದ ಸಂದರ್ಭ ಇಲ್ಲಿಗೆ ಆಗಮಿಸಿ ಗುರುಸ್ವಾಮಿಯಾಗಿ ಎಲ್ಲಾ ಅಯ್ಯಪ್ಪ ವೃತಧಾರಿಗಳಾಗಿ ಮಾರ್ಗದರ್ಶನ ಮಾಡುತ್ತಿದ್ದರು.

ಜಾಹೀರಾತು

ಅವರ ಅಗಲುವಿಕೆ ನೋವು ಉಂಟುಮಾಡಿದ್ದು ಅವರ ಸಂಸ್ಮರಣೆಯಾಗಿ ಭಕ್ತವೃಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅಭಿನಂದನೀಯ ಎಂದರು. ಧನು ಕುಲಾಲ್ ಬೋಳಂತೂರು ಸ್ವಾಗತಿಸಿ, ರವೀಶ್ ನಿರೂಪಿಸಿ ವಂದಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ