ಬಂಟ್ವಾಳ

ನಾಗಶ್ರೀ ಮಿತ್ರವೃಂದ, ಮಾತೃವೃಂದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

VNR GOLD

ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿ ಹಾಗೂ ಆಚರಣೆಯಲ್ಲಿ ನಮ್ಮ ಬದುಕನ್ನು ಬೆಸೆಯುವ ಕೊಂಡಿಗಳು ಇಂದಿನ ಈ ಕಾಲ ಘಟ್ಟದಲ್ಲಿ ನಮ್ಮ ಧಾರ್ಮಿಕ ಆಚರಣೆಯೊಳಗೆ ವೈಜ್ಞಾನಿಕ ವಿಚಾರಗಳು ಇದೆ ಇವುಗಳ  ಹುಡುಕಬೇಕಿದೆ.ನಮ್ಮೊಳಗೆ ಧರ್ಮ ಜಾಗೃತಿ ಅಗತ್ಯವಿದೆ ಎಂದು ಧರ್ಮ ಜಾಗೃತಿ ಸಮನ್ವಯ ಡಾ.ಪ್ರಣಭ್ ಮಲ್ಯ ಕಿವಿಮಾತು ಹೇಳಿದರು.

ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ .ರಿ.ಕಮ್ಮಾಜೆ ಹಾಗೂ ಮಾತೃ ವೃಂದ ಕಮ್ಮಾಜೆ ಆಶ್ರಯದಲ್ಲಿ ಕಮ್ಮಾಜೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ 25 ನೇ ವರುಷ ಮೊಸರು ಕುಡಿಕೆ ಉತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರಾದ ಗಂಗಾಧರ ರೈ ವಹಿಸಿದ್ದು, ಭಜರಂಗದಳದ ಸಹ ಸಂಯೋಜಕ ಸಂತೋಷ್ ಸರಪಾಡಿ, ಬಿಗ್ ಬಾಸ್ ,ಸ್ಪರ್ಧಿ ಧನ್ ರಾಜ್ ಆಚಾರ್ಯ, ಹಿಂದೂ ಜಾಗರಣ ವೇದಿಕೆಯ ಪ್ರಣಿತ್ ವಾಮದ ಪದವು, ಕೆಎಂಎಫ್ ಮಂಗಳೂರಿನ ನಿರ್ದೇಶಕ ನಂದರಾಮ್ ರೈ, ಚೈತನ್ಯ ಶಿಕ್ಷಣ ಸಂಸ್ಥೆಯ ಸ್ಪಾಪಕರು ವಿಜೇತಾ ಅಮೀನ್, ತೆಂಕಬೆಳ್ಳೂರು ಬಿ.ಜೆ‌‌.ಪಿ ಸಂಚಾಲಕರು ಮುರಳಿಧರ ಶಟ್ಟಿ, ಸ್ಥಳದಾನಿ ನಾರಾಯಣ ಪೊಯ್ಯ, ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷ ವಸಂತ ಎಂ., ಜೈ ತುಳುನಾಡ್ ಸಂಘದ ಗೌರವ ಅಧ್ಯಕ್ಷ ಜಗದೀಶ್ ರೈ, ಕಾವೇಶ್ವರ ಭಕ್ತ ವೃಂದದ ಅಧ್ಯಕ್ಷರು ಸುರೇಶ್,  ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ಗಣೇಶ್ ಕುಮಾರ್, ‌ ಯಕ್ಷಕಲಾ ಸಂಘದ ಅಧ್ಯಕ್ಷ ಲೋಕೇಶ್ ಸಂಘದ ಅಧ್ಯಕ್ಷರಾದ ಹರೀಶ್ ಮುಡೈಕೋಡಿ ಮಾತೃ ವೃಂದ ಅಧ್ಯಕ್ಷರಾದ ಸೌಮ್ಯ ಕಮ್ಮಾಜೆ ,ಮೊಸರು ಕುಡಿಕೆ ಉತ್ಸವ ಸಮಿತಿ ಸಂಚಾಲಕರು ಸಂದೀಪ್ ಈಶನಗರ ಉಪಸ್ಥಿತರಿದ್ದರು.

ಜಾಹೀರಾತು

ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಧಾರ್ಮಿಕ ಮುಖಂಡ ಸತ್ಯಜಿತ್ ಸುರತ್ಕಲ್, ಜಗದೀಶ್ ನೆತ್ತರಕೆರೆ, ದಕ್ಷಿಣ ಕನ್ನಡ ಜಿಲ್ಲೆಯ ಬಿ.ಜೆ.ಪಿ ಜಿಲ್ಲಾ ವಕ್ತಾರರಾದ ಮಾಧವ ಮಾವೆ ಶುಭ ಹಾರೈಸಿದರು.

D.SHIVA BHAT JWELLERS

ಸಾಮಾಜಿಕ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು ಕ್ರೀಡಾಂಗಣ ಉದ್ಘಾಟನೆ ನಡೆಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಊರಿನ ಸಾಧಕರನ್ನು ಹಾಗೂ ಸಮಾಜಮುಖಿ ಚಿಂತಕರನ್ನು ಸನ್ಮಾನಿಸಲಾಯಿತು. ಧಾರ್ಮಿಕದೊಂದಿಗೆ,ಊರ ಪರ ಊರ ಬಂಧುಗಳಿಗೆ  ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆಯನ್ನು ನಡೆಸಲಾಯಿತು.ಸಂಘ ಕೋಶಾಧಾರಿ ತಿರುಲೇಶ್ ಪ್ರಸ್ತಾವಿಕದೊಂದಿಗೆ ಸ್ವಾಗತಿಸಿದರು. ಸುರೇಶ್. ಎಸ್.ನಾವೂರು ‌ಧಾರ್ಮಿಕ ಸಭಾ ಕಾರ್ಯಕ್ರಮ ನಿರೂಪಿಸಿದರು.ರಂಜಿತ್ ಕಮ್ಮಾಜೆ, ದಿಶಾ ಕಮ್ಮಾಜೆ ದಿನೇಶ್ ವರಕೋಡಿ ಕ್ರೀಡಾ ಚಟುವಟಿಕೆ ನೇವರಿಸಿದರು‌‌. ರಾಜೇಶ್ ವಂದಿಸಿದರು

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts