ಬಂಟ್ವಾಳ: ಬಂಟ್ವಾಳದ ಕೊಳಕೆ ಮೊಹಿಯ್ಯದ್ದೀನ್ ಜುಮ್ಮಾ ಮಸೀದಿಯಿಂದ ಸಿರಾಜುಲ್ ಹುದಾ ಮಸೀದಿ ಸುಭಾಷ್ ನಗರಕ್ಕೆ ಈದ್ ಮಿಲಾದ್ ಮೆರವಣಿಗೆ ನಡೆಯುವ ವೇಳೆ ಬೇಂಕ್ಯ ಆಟೊ ಪಾರ್ಕ್ ವತಿಯಿಂದ ಸಿಹಿ ತಿಂಡಿ ಹಾಗೂ ತಂಪು ಪಾನೀಯ ನೀಡುವ ಕಾರ್ಯ ನಡೆಯಿತು
ಸರ್ವ ಧಾರ್ಮಿಕ ಹಬ್ಬಗಳಿಗೆ ಬೇಂಕ್ಯ ಆಟೊ ಪಾರ್ಕ್ ಚಾಲಕರು ಪರಸ್ಪರ ಪ್ರೀತಿ,ಸೌಹಾರ್ದ ವಾಗಿ ಕೈ ಜೋಡಿಸಿ ,ಆಟೊ ಚಾಲಕರು ತಮ್ಮಿಂದ ಆಗುವ ಮೊತ್ತವನ್ನು ಒಟ್ಟುಗೂಡಿಸಿ ಹಬ್ಬದಲ್ಲಿ ಭಾಗಿಯಾಗುವುದು ವೈಶಿಷ್ಟ. ಟೀಮ್ ಜಿಬ್ರಾ ತಂಡ ಜತೆಯಾಗಿ ಈ ಕಾರ್ಯ ನಡೆದಿದ್ದು, ಸರ್ವಧರ್ಮೀಯರೂ ಪಾಲ್ಗೊಂಡರು