ಶುಕ್ರವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಮಾಣಿ ಬೊಳ್ಳುಕಲ್ಲಿನಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ಕಮಲ ರಸ್ತೆಯಲ್ಲಿ ಶ್ರೀದೇವಿ ಭಜನಾ ಮಂದಿರದ ಹತ್ತಿರ ಬೃಹತ್ ಮರವೊಂದು ವಿದ್ಯುತ್ ಟ್ರಾನ್ಸ್ ಫಾರ್ ಮರ್ ಕಂಬದ ಮೇಲೆ ಬಿದ್ದಿದೆ. ವಿದ್ಯುತ್ ತಂತಿಗಳು ತುಂಡಾಗಿ ರಸ್ತೆ ಮೇಲೆ ಮರಸಹಿತ ಮುರಿದುಬಿದ್ದು ಸಂಚಾರ ಬಂದ್ ಆಗಿದೆ.
ರಾತ್ರಿ ಶ್ರೀಮಠದ ಕಾರ್ಯದರ್ಶಿ ಶಿವಪ್ರಸಾದರ ನೇತೃತ್ವದಲ್ಲಿ ಸ್ಥಳೀಯರು ಮರವನ್ನು ಕಡಿದು ರಸ್ತೆ ಯನ್ನು ಸಂಚಾರಕ್ಕೆ ತೆರವುಗೊಳಿಸಲು ಶ್ರಮಿಸಿದರು. ವಿದ್ಯುತ್ ಪರಿವರ್ತಕ ಹಾನಿಗೊಂಡಿರುವುದರಿಂದ ಪೆರಾಜೆ ಪರಿಸರಕ್ಕೆ ಕರೆಂಟಿಲ್ಲದ ರಾತ್ರಿಯಾಗಿದೆ.