ಜವಾಹರ್ ಬಾಲ್ ಮಂಚ್ ವತಿಯಿಂದ ದಾವಣೆಗೆರೆಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳೊತ್ಸವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದಿಂದ ಜವಾಹರ್ ಬಾಲ್ ಮಂಚ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆ ಶೈಲಜಾ ರಾಜೇಶ್ ನೇತೃತ್ವದಲ್ಲಿ 25 ಮಕ್ಕಳು ಭಾಗವಹಿಸಿದ್ದು ಅವರಲ್ಲಿ 5 ಮಕ್ಕಳು ರಾಜಸ್ಥಾನದ ಜೈಪುರ ದಲ್ಲಿ ನಡೆಯುವ ರಾಷ್ಟ್ರಮಟ್ಟದ ಮಕ್ಕಳೊತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ಯಕ್ಷನೃತ್ಯದಲ್ಲಿ ಪಂಜಾಲಕಟ್ಟೆಯ ಶಾನ್ವಿ ಪೂಜಾರಿ, ಹಾಗೂ ಯಶಸ್ವಿನಿ, ಭರತನಾಟ್ಯದಲ್ಲಿ ಮಂಗಳೂರಿನ ವೈಷ್ಣವಿ , ಹಾಗೂ ಧನಲಕ್ಷ್ಮೀ ಚಿತ್ರಕಲೆಯಲ್ಲಿ ಬಂಟ್ವಾಳ ಸಿದ್ಧಾಕಟ್ಟೆ ಅನೀಶ್ ಪೂಜಾರಿ ಆಯ್ಕೆಯಾಗಿದ್ದಾರೆ.