ಬಂಟ್ವಾಳ

ಜೋಡುಮಾರ್ಗ ಜೇಸಿಯಿಂದ ಉತ್ತಮ ಕಾರ್ಯ: ಮಂಜುನಾಥ ಆಚಾರ್ಯ

ಬಂಟ್ವಾಳ: ಜೇಸಿ ಜೋಡುಮಾರ್ಗ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದು, ವ್ಯಕ್ತಿತ್ವ ವಿಕಸನ ತರಬೇತಿಗಳ ಮೂಲಕ ನಾಯಕತ್ವ ರೂಪಿಸಲು ಸಾಧ್ಯ ಎಂದು ಉದ್ಯಮಿ ಮಂಜುನಾಥ ಆಚಾರ್ಯ ಹೇಳಿದರು.

ಜಾಹೀರಾತು

ಬಂಟ್ವಾಳ ಲಯನ್ಸ್ ಸಭಾಂಗಣದಲ್ಲಿ ಜೇಸಿ ಜೋಡುಮಾರ್ಗ ಆಯೋಜಿಸಿದ ಜೈತ್ರ ಹೆಸರಿನಲ್ಲಿ ಆಯೋಜಿಸಲಾದ ಜೇಸಿ ಸಪ್ತಾಹ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಭಾರತೀಯ ಲಲಿತಕಲೆಗಳ ಅಧ್ಯಯನ, ಅಧ್ಯಾಪನ ನಡೆಸಿರುವ ವಸುಧಾ ಜಿ.ಎನ್. ಬೋಳಂತೂರು ಅವರಿಗೆ ಕಲಾಶ್ರೀ ಮತ್ತು ಜೇಸಿ ಸಂಸ್ಥೆಯಲ್ಲಿ ನೀಡಿದ ಸೇವೆಗಾಗಿ ಶ್ರೀನಿಧಿ ಭಟ್ ಅವರಿಗೆ ಜೇಸಿ ಕಮಲಪತ್ರ ಪುರಸ್ಕಾರ ನೀಡಿ ಗೌರವಿಸಲಾಯಿತು.ಅಧ್ಯಕ್ಷತೆಯನ್ನು ಘಟಕಾಧ್ಯಕ್ಷೆ ಗಾಯತ್ರಿ ಲೋಕೇಶ್ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷ ಹರಿಪ್ರಸಾದ್ ಕುಲಾಲ್, ಜೇಜೆಸಿ ಅಧ್ಯಕ್ಷೆ ರಶ್ಮಿತಾ, ಕಾರ್ಯಕ್ರಮ ನಿರ್ದೇಶಕ ಸುಬ್ರಹ್ಮಣ್ಯ ಪೈ ಉಪಸ್ಥಿತರಿದ್ದರು. ಕಾರ್ಯದರ್ಶಿ ರಮ್ಯ ವಿನಾಯಕ್ ವಂದಿಸಿದರು.  .ಸಪ್ತಾಹ ಅಂಗವಾಗಿ ನೃತ್ಯವೈವಿಧ್ಯ ಸ್ಪರ್ಧೆ ನಡೆಯಿತು. ರವೀಂದ್ರ ಕುಕ್ಕಾಜೆ  ಸ್ಪರ್ಧೆಯನ್ನು ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ