ಬಂಟ್ವಾಳ

ವಿಜಯೋತ್ಸವ ರದ್ದುಗೊಳಿಸಿ, ನಾಲ್ಕು ಕುಟುಂಬಗಳಿಗೆ ನೆರವು ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ವಿಜಯೋತ್ಸವವನ್ನು ಆಚರಿಸುವ ಬದಲು ಸಂಕಷ್ಟದಲ್ಲಿರುವ ಹಾಗೂ ಇತ್ತೀಚೆಗೆ ಮೃತಪಟ್ಟ ಬಿಜೆಪಿಯ ನಾಲ್ಕು ಕಾರ್ಯಕರ್ತರ  ಕುಟುಂಬಗಳಿಗೆ ನೆರವಾಗುವ ಮೂಲಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ (RAJESH NAIK BANTWAL MLA) ಅವರು ಗಮನ ಸೆಳೆದಿದ್ದಾರೆ.

ಜಾಹೀರಾತು

ನಾನಾ ಕಾರಣಗಳಿಂದ ಬಿಜೆಪಿ ಕಾರ್ಯಕರ್ತರು ನಮ್ಮನ್ನಗಲಿದ್ದು, ಆಘಾತ ತಂದಿದ್ದು, ಇವರ ಕುಟುಂಬಕ್ಕೆ ಪಕ್ಷದ ವತಿಯಿಂದ ಸಹಾಯವಾಗುವ ನಿಟ್ಟಿನಲ್ಲಿ ಶಾಸಕರ ಕಚೇರಿ ಉದ್ಘಾಟನಾ ದಿನದಂದು ವಿಜಯೋತ್ಸವವನ್ನು ರದ್ದುಪಡಿಸಿ, ಪ್ರತಿಯೊಂದು ಕುಟುಂಬಕ್ಕೂ ತಲಾ 2 ಲಕ್ಷ ರೂಗಳನ್ನು ಶಾಸಕ ರಾಜೇಶ್ ನಾಯ್ಕ್ ವಿತರಿಸಿದರು. ಜನಾರ್ಧನ ಬಾರಿಂಜೆ, ಪ್ರವೀಣ್ ನಾಯಕ್, ನಿತಿನ್ ಯಾನೆ ರೂಪೇಶ್ ಪೂಜಾರಿ, ವಿಜಿತ್ ಗುರುವಾಯನಕೆರೆ ಅವರ ಕುಟುಂಬಕ್ಕೆ ಶಾಸಕರು ನೆರವು ನೀಡಿದ್ದಾರೆ.

ಪ್ರಮುಖರಾದ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಬುಡಾ ಮಾಜಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ, ಸುಲೋಚನ ಜಿ.ಕೆ.ಭಟ್, ಮಾದವ ಮಾವೆ, ಸುದರ್ಶನ ಬಜ ,ಪುರುಷೋತ್ತಮ ಶೆಟ್ಟಿ, ಗಣೇಶ್ ರೈ ಮಾಣಿ, ಸತೀಶ್ ಪೂಜಾರಿ, ವಾಮನ ಆಚಾರ್ಯ, ಅಜಿತ್ ಶೆಟ್ಟಿ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಯಶೋಧರ ಕರ್ಬೆಟ್ಟು, ಅಭಿಷೇಕ್ ಶೆಟ್ಟಿ ಗೋಳ್ತಮಜಲು, ಅಭಿಷೇಕ್ ಸುವರ್ಣ, ಸಂತೋಷ್ ಕುಲಾಲ್, ಕಾರ್ತಿಕ್ ಬಲ್ಲಾಳ್,ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ರಾಜಾರಾಂ ನಾಯಕ್, ಜಯಲಕ್ಮೀ ಕಾವಳಮೂಡೂರು, ರಾಜ್ ಗೋಪಾಲ ಪ್ರಭು, ಪ್ರಶಾಂತ್ ಕೆಂಪುಗುಡ್ಡೆ, ಪ್ರಕಾಶ್ ಅಂಚನ್, ಹರೀಶ್ ಪ್ರಭು, ರವಿ ಅಮ್ಮುಂಜೆ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.