ಬಂಟ್ವಾಳ

ರೋಟರಿ ಟೌನ್ ವತಿಯಿಂದ ಶಿಕ್ಷಕರಿಗೆ ಸನ್ಮಾನ, ಇಂಟರಾಕ್ಟ್ ಕ್ಲಬ್ ಗಳಿಗೆ ಚಾಲನೆ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಸಂಚಯಗಿರಿಯ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಬಿ.ರಾಮಚಂದ್ರ ರಾವ್, ಪ್ರೇಮಾಕುಮಾರಿ ಮತ್ತು ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚೆನ್ನಕೇಶವ ಅವರನ್ನು ಕೇಂದ್ರದ ಮುಖ್ಯಸ್ಥ ಪ್ರೊ ತುಕಾರಾಮ ಪೂಜಾರಿ ಗೌರವಿಸಿದರು, ಈ ಸಂದರ್ಭದಲ್ಲಿ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭ ಇಂಟರ್ಯಾಕ್ಟ್ ಕ್ಲಬ್ ಗಳಿಗೆ ಚಾಲನೆ ನೀಡಲಾಯಿತು. ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಡ ಶಾಲೆ ಶಂಭೂರು, ಸರಕಾರಿ ಪ್ರೌಢಶಾಲೆ ಅಜ್ಜಿಬೆಟ್ಟು, ಸರಕಾರಿ ಪ್ರೌಢಶಾಲೆ ಗೊಳ್ತ ಮಜಲ್, ಪದವಿ ಪೂರ್ವ ಕಾಲೇಜು ತುಂಬೆ, ಆಂಗ್ಲ ಮಾಧ್ಯಮ ತೌಹೀದ್ ಪ್ರೌಢಶಾಲೆ ಬಂಟ್ವಾಳ ಒಟ್ಟು ಐದು ಪ್ರೌಢಶಾಲೆಗಳ ಪದಗ್ರಹಣ ಕಾರ್ಯಕ್ರಮವು ರೋಟರಿ ಜಿಲ್ಲಾ ಕಾರ್ಯದರ್ಶಿ ರೋ ಕೆ ಎನ್ ಹೆಗ್ಡೆ ಮತ್ತು ರೋಟರಿ ಅಧ್ಯಕ್ಷ ರೋ ಪಿ ಎಚ್ ಎಫ್ ಚಿತ್ತರಂಜನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು,

ಈ ಸಂದರ್ಭದಲ್ಲಿ ಕಾರ್ಯದರ್ಶಿ ರೋ ಉಮೇಶ್ ಆರ್ ಮೂಲ್ಯ, ರೋ ಕಿಶೋರ್ ಕುಮಾರ್, ರೋ ನಾರಾಯಣ್ ಪೆರ್ನೆ, ರೋ ಸವಿತ ಶೆಟ್ಟಿ, ರೋ ಹನೀಫ್ ಕೋಸ್ಟಲ್,ರೋ ಮನೋಜ್ ಕುಲಾಲ್, ಆನ್ಸ್ ಅಧ್ಯಕ್ಷೆ ವಿದ್ಯಾ ಉಮೇಶ್ ಮತ್ತು ಇಂಟ್ರಾಕ್ಟ್ ಕ್ಲಬ್ಬಿನ ಅಧ್ಯಕ್ಷರು ಕಾರ್ಯದರ್ಶಿ ಸದಸ್ಯರು ಮತ್ತು ಸಂಯೋಜಕರು ಮತ್ತು ಕೇಂದ್ರದ ಮುಖ್ಯಸ್ಥರಾದ ಪ್ರೊಫೆಸರ್ ತುಕಾರಾಂ ಪೂಜಾರಿಯವರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.