ವಾಮದಪದವು

ಪಿ.ಎಮ್ .ಕಿಸಾನ್ ಸಮ್ಮಾನ್ ಯೋಜನೆಯ ನೆರವು ಸಿಗುವಂತೆ ಆದೇಶ ಹೊರಡಿಸಲು ಪ್ರಭಾಕರ ಪ್ರಭು ಆಗ್ರಹ

www.bantwalnews.com Report ಬಂಟ್ವಾಳನ್ಯೂಸ್ ವರದಿ

ಪ್ರಭಾಕರ ಪ್ರಭು

ಕೃಷಿ ಜಮೀನು ಹೊಂದಿರುವ ಎಲ್ಲಾ ಅರ್ಹ  ರೈತರ ಆದಾಯ ಹೆಚ್ಚಿಸಲು ನೆರವಾಗುವ ಉದ್ದೇಶಕ್ಕಾಗಿ ಪಿ.ಎಮ್ .ಕಿಸಾನ್ ಸಮ್ಮಾನ್ ಯೋಜನೆಯಡಿ ಫೆಬ್ರವರಿ 2019 ರ ನಂತರ ಕೃಷಿ ಭೂಮಿ ಹೊಂದಿರುವ ರೈತರಿಗೆ ನೆರವು ಸಿಗುವಂತೆ ಸೂಕ್ತ ಆದೇಶ ಹೊರಡಿಸುವಂತೆ ಬಂಟ್ವಾಳ ತಾ.ಪಂ.ನ ಮಾಜಿ ಸದಸ್ಯ ಪ್ರಭಾಕರ ಪ್ರಭು‌ ರಾಜ್ಯ ಕೃಷಿ ಸಚಿವರು ಹಾಗೂ ಕೃಷಿ ಆಯುಕ್ರನ್ನು ಲಿಖಿತ ಮನವಿ ಮೂಲಕ ಒತ್ತಾಯಿಸಿದ್ದಾರೆ.  2018  ಡಿ.1 ಅನ್ವಯವಾಗುವಂತೆ ಫೆಬ್ರವರಿ 2019 ರ ಒಳಗಾಗಿ ಸ್ವಾಧಿನದಲ್ಲಿರುವ ಭೂದಾಖಲೆಯಲ್ಲಿ  ಹೆಸರಿರುವ ಎಲ್ಲಾ ಅರ್ಹ ರೈತ ಕುಟುಂಬದವರಿಗೆ  2000 ಸಾ.ರೂ.ವಿನಂತೆ  ವಾರ್ಷಿಕ ಮೂರು ಕಂತುಗಳಲ್ಲಿ ಪ್ರಧಾನ ಮಂತ್ರಿ  ಕಿಸಾನ್ ಸಮ್ಮಾನ್ ಯೋಜನೆಯು 6000 ಸಾ.ರೂ. ರೈತರ ಖಾತೆಗಳಿಗೆ ನೇರವಾಗಿ ಸಹಾಯಧನ ರೂಪದಲ್ಲಿ ಅರ್ಥಿಕ ನೆರವು ನೀಡುತ್ತಿರುವುದು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ. ಆದರೆ 2019 ಪೆಬ್ರವರಿ ತಿಂಗಳ ನಂತರ ರಾಜ್ಯದಲ್ಲಿ ಅನೇಕ ರೈತ ಕುಟುಂಬಗಳು ಕೃಷಿ ಜಮೀನು ಖರೀದಿಸಿ ಹಾಗೂ ಪ್ರತ್ಯೇಕ ವಿಭಾಗ ಪತ್ರ ಮಾಡಿಕೊಂಡು ಮತ್ತು ಇನ್ನಿತರ ಮೂಲಗಳಿಂದ ಕೃಷಿ ಜಮೀನು ಹೊಂದಿರುವ ರೈತ ಕುಟುಂಬಗಳು ಈ ಯೋಜನೆಯಿಂದ ವಂಚಿತವಾಗಿವೆ.  ಈ ಮಹತ್ವಾಕಾಂಕ್ಷಿ  ಯೋಜನೆಯು ರಾಷ್ಟ್ರದ ಎಲ್ಲಾ ಅರ್ಹ ಕೃಷಿ ಜಮೀನು ಹೊಂದಿರುವ ರೈತ ಕುಟುಂಬಗಳಿಗೆ ತಲುಪುವುದು ಪ್ರಧಾನಿ  ನರೇಂದ್ರ ಮೋದಿಯವರ  ಆಶಯವಾಗಿದೆ.  ಈ ಹಿನ್ನಲೆಯಲ್ಲಿ ಫೆಬ್ರವರಿ 2019 ರ ನಂತರ ಕೃಷಿ ಭೂಮಿ ಹೊಂದಿರುವ ರೈತರಿಗೆ  ಈ ಯೋಜನೆಯ  ನೆರವು ಸಿಗುವ ನಿಟ್ಟಿನಲ್ಲಿ  ಸೂಕ್ತ ಆದೇಶ ಹೊರಡಿಸುವಂತೆ ಪ್ರಭು ಅವರು ಕೃಷಿ ಸಚಿವರನ್ನು ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.