ವಾಮದಪದವು

ಭಾರತೀಯ ಸೇನಾ ಶಕ್ತಿ ಬಿಪಿನ್ ರಾವತ್ ಗೆ ಸಿದ್ದಕಟ್ಟೆಯಲ್ಲಿ ಭಾವಪೂರ್ಣ ಶ್ರದ್ದಾಂಜಲಿ

ಬಂಟ್ವಾಳನ್ಯೂಸ್ ವರದಿ, www.bantwalnews.com REPORT

ಬಂಟ್ವಾಳ: ಭಾರತೀಯ ಸೇನಾ ಪಡೆಗಳ ಮುಖ್ಯ ಸೇನಾ ನಾಯಕ, ಸೇನಾ ಶಕ್ತಿಯ ಪ್ರಖರ ಜ್ಯೋತಿ, ಭಾರತಾಂಬೆಯ ಸೇವೆಗಾಗಿ ತನ್ನ ಬದುಕನ್ನೇ ಅರ್ಪಣೆ ಮಾಡಿದ ದಿವ್ಯಾತ್ಮ ಬಿಪಿನ್ ರಾವತ್ ಅವರಂತಹ ಸಾವಿರಾರು ಬಿಪಿನ್ ರಾವತ್ ಮತ್ತೇ ದೇಶದಲ್ಲಿ ಹುಟ್ಟಿ ಬರಲಿ ಎಂದೂ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಪ್ರಾರ್ಥನೆ ಮಾಡಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿದ್ದಕಟ್ಟೆ ನಗರ ವತಿಯಿಂದ ಸಿದ್ದಕಟ್ಟೆಯಲ್ಲಿ ಜರಗಿದ ರಾಷ್ಟ್ರ ರಕ್ಸಕ, ಭಾರತೀಯ ಸೇನಾ ಪಡೆ ನಾಯಕ ಬಿಪಿನ್ ರಾವತ್ ರವರಿಗೆ ಸಿದ್ದಕಟ್ಟೆ ನಾಗರಿಕರ ಪರವಾಗಿ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿ ಮೌನ ಪ್ರಾರ್ಥನೆ ಗೈಯುತ್ತಾ ನುಡಿ ನಮನ ಸಲ್ಲಿಸಿದರು.

ಜಾಹೀರಾತು

ಜನರಲ್ ಬಿಪಿನ್ ರಾವತ್ ಮತ್ತು ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದ  ಯೋಧರಿಗೆಲ್ಲ ಸಿದ್ದಕಟ್ಟೆ ನಾಗರಿಕರು ಶ್ರದ್ಧಾಂಜಲಿ ಅರ್ಪಿಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿದ್ದಕಟ್ಟೆ ನಗರದ  ವತಿಯಿಂದ  ನಡೆದ ಶ್ರದ್ಧಾಂಜಲಿಯಲ್ಲಿ ಸ್ಥಳೀಯ ಸಂಘಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಸದಸ್ಯರಾದ ಸಂದೇಶ ಶೆಟ್ಟಿ ಪೋಡುಂಬ, ಸುನೀಲ್ ಶೆಟ್ಟಿಗಾರ್, ಉದಯ ತರಕಾರಿ, ಸಿದ್ದಕಟ್ಟೆ ಪದ್ಮ ಕ್ಲಿನಿಕ್ ವೈದಾರಾದ  ಡಾ :ಪ್ರಭಾಚಂದ್ರ,ನಿವೃತ್ತ ಡಿ. ಫ್. ಓ ದಾಮೋದರ್ ಶೆಟ್ಟಿಗಾರ್ ಸೇರಿದಂತೆ ಸಿದ್ದಕಟ್ಟೆ ನಾಗರಿಕರು ಹಾಗೂ ಎಬಿವಿಪಿ ವತಿಯಿಂದ ಗುರುಪ್ರಸಾದ್, ದಿನೇಶ್, ಶಿವಕುಮಾರ್, ಕಿರಣ್, ಸೂರಾಜ್, ಹೇಮಾಂತ್, ಪ್ರಜ್ವಲ್ ಉಪಸ್ಥಿತರಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ