ಕಲ್ಲಡ್ಕ

ಗೋಳ್ತಮಜಲು ಗ್ರಾಮದ ಬೂತ್ ನಂಬರ್ 180ರಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಗೋಳ್ತಮಜಲು ಗ್ರಾಮದ ಬೂತ್ ನಂಬರ್ 180 ರಲ್ಲಿ ಪಂಡಿತ್ ದೀನ್ ದಯಾಳ್ ಜೀಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಜಿಲ್ಲಾ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ಪಂಡಿತ್ ದೀನ್ ದಯಾಳ್ ಜೀಯವರ ಹುಟ್ಟುಹಬ್ಬದ ದಿನಾಚರಣೆಯ ಮಹತ್ವ ಮತ್ತು ಸೇವೆ ಮತ್ತು ಸಮರ್ಪಣೆಯ ದಿನದ ಮಹತ್ವವನ್ನು ತಿಳಿಸಿದರು .ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು .ಬೂತ್ ನ ಅಧ್ಯಕ್ಷರಾದ ಧೀರಜ್, ಪ್ರಧಾನ ಕಾರ್ಯದರ್ಶಿ ಸುನೀಲ್ ಅಂಚನ್ ಗ್ರಾಪಂ ಸದಸ್ಯರಾದ ನಳಿನಿ, ಗೋಳ್ತಮಜಲು ಮಾಜಿ ಸದಸ್ಯರಾದ ಲಲಿತಾ,ಗ್ರಾಮದ ಬಿಜೆಪಿ  ಸಂಚಾಲಕರಾದ ನವನೀತ ಬಲ್ಕಟ್ಟ ಮತ್ತು ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು   ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಹಣ್ಣು ಹಂಪಲಿನ ಸಸಿಗಳನ್ನು ವಿತರಿಸಲಾಯಿತು. ಪೋಸ್ಟ್ ಕಾರ್ಡ್ ಅಭಿಯಾನ ವನ್ನು ಮಾಡಲಾಯಿತು

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.