ಬಂಟ್ವಾಳ

ಅಜಿಲಮೊಗರು: ಯಕ್ಷಚಿಗುರು ಕಲಾ ತಂಡದಿಂದ ಬ್ರಹ್ಮಶ್ರೀ ನಾರಾಯಣಗುರು ವೇದಿಕೆ ಉದ್ಘಾಟನೆ

ಯಕ್ಷ ಚಿಗುರು ಕಲಾ ತಂಡ ಅಡ್ಯಾಲು ಅಜಿಲಮೊಗರು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಪೂಜೆ ಮತ್ತು ನೂತನ ನಾರಾಯಣ ಗುರು ವೇದಿಕೆ ಉದ್ಘಾಟನೆ ನಡೆಯಿತು.

ನವೀನ್ ಶಾಂತಿ ಅಡ್ಯಾಲು ಇವರ ಮುಂದಾಳತ್ವದಲ್ಲಿ ಮುನ್ನಡೆಯುತ್ತಿರುವ ಯಕ್ಷ ಚಿಗುರು ಕಲಾ ತಂಡದ ವತಿಯಿಂದ ಸಾಯಿ ಶಾಂತಿ ಕೋಕಲ ಇವರ  ಪೌರೋಹಿತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಪೂಜೆ ಹಾಗೂ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿ ಇಳಿಯೂರು ಇವರಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ ನಡೆಯಿತು.

ನಂತರ ನಾರಾಯಣ ಗುರು ವೇದಿಕೆಯ ಉದ್ಘಾಟನೆ ಕಾರ್ಯದಲ್ಲಿ ಪ್ರಶಾಂತ್ ನಾಯಕ್ ಮಾವಿನಕಟ್ಟೆ, ನಟರಾಜ್ ಪೂಜಾರಿ ಕುಟ್ಟಿಕಲ ಮತ್ತು ಪುರುಷೋತ್ತಮ ಪೂಜಾರಿ ಕಾಯರ್ ಪಲ್ಕೆ ಇವರಿಗೆ ಗೌರವಾರ್ಪಣೆ ನಡೆಯಿತು. ಪುರುಷೋತ್ತಮ ಪೂಜಾರಿ ಮೊಗರು ಮಜಲು, ಶಿವಪ್ಪ ಪೂಜಾರಿ ಹಟದಡ್ಕ, ಸಾಯಿ ಶಾಂತಿ ಕೋಕಲ, ಲಕ್ಷ್ಮೀನಾರಾಯಣ ನೇಲ್ಯಪಲ್ಕೆ, ಮತ್ತು ನವೀನ್ ಶಾಂತಿ ಅಡ್ಯಾಲು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.