ಜೈ ಭಾರತ್ ಕಕ್ಕೆಪದವು ಹಾಗೂ ಬ್ಲಡ್ ಡೋನರ್ಸ್, ಮಂಗಳೂರು ಯೆನಪೋಯ ರಕ್ತನಿಧಿ, ದೇರಳಕಟ್ಟೆ ಇದರ ಸಹಕಾರದೊಂದಿಗೆ ಬ್ರಹತ್ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ವಿಶ್ವನಾಥ್ ಸಾಲ್ಯಾನ್ ಬಿತ್ತ, ಪರಮೇಶ್ವರ ನಾಯ್ಕ್,ಡೊಂಬಯ್ಯ ಕಟ್ಟದ ಪಡ್ಪು, ಜೈ ಭಾರತ್ ಅಧ್ಯಕ್ಷರಾದ ಹಮೀದ್ ಪಡೀಲ್ ಬೆಟ್ಟು, ಡಾ. ದಿನೇಶ್ ಬಂಗೇರ, ತಿಲಕ್ ಸುದೇಕರ್, ತಿಲಕ್ ಅಗರಂಡಿ, ಪುನೀತ್ ಕಕ್ಕೆಪದವು ಮೊದಲಾದವರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…