ಸಿನಿಮಾ

ಪದ್ದೈ ಬಂಗಾರ್ ಕಿರುಚಿತ್ರಕ್ಕೆ ಮುಹೂರ್ತ

ಜಾಹೀರಾತು

ಬಂಟ್ವಾಳ: ಸುವರ್ಣ ಕ್ರಿಯೇಶನ್ಸ್ ಬಿ.ಸಿ.ರೋಡ್ ನಿರ್ಮಾಣದ ಪದ್ದೈ ಬಂಗಾರ್ ತುಳು ಕಿರುಚಿತ್ರದ ಮುಹೂರ್ತ ಕಾರ್ಯಕ್ರಮ ಶ್ರೀ ಕ್ಷೇತ್ರ ಪನೋಲಿಬೈಲ್ ನಲ್ಲಿ ಗುರುವಾರ ನಡೆಯಿತು. ಕಾರಣಿಕ ದೈವ ಶ್ರೀ ಕಲ್ಲುರ್ಟಿ ಸಾನ್ನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿ ಮುಹೂರ್ತ ನೆರವೇರಿಸಲಾಯಿತು. ಈ ಸಂದರ್ಭ ಕಿರುಚಿತ್ರದ ಪ್ರಥಮ ಪೋಸ್ಟರ್ ಅನ್ನು ಚಲನಚಿತ್ರ ಯುವ ನಿರ್ದೇಶಕ, ನಾಟಕಕಾರ ಜೆ.ಪಿ. ತೂಮಿನಾಡ್ ಅವರು ಬಿಡುಗಡೆಗೊಳಿಸಿ ಶುಭಹಾರೈಸಿದರು. ಚಲನಚಿತ್ರ, ರಂಗಭೂಮಿ ನಟ ಪ್ರಕಾಶ್ ತೂಮಿನಾಡು, ಶಮಿಲ್ ಬಂಗೇರ, ನಿಮಾ೯ಪಕರಾದ ಲಕ್ಷೀಶ್ ಕುಲಾಲ್ ಪನೋಲಿಬೈಲ್, ಜಯರಾಜ್ ಅತ್ತಾಜೆ, ನಿರ್ದೇಶಕ ರಚನ್ ಆಲಾಡಿ, ಛಾಯಾಗ್ರಾಹಕ ತ್ರಿಶಾಲ್ ಶೆಟ್ಟಿ ಪೂಂಜ, ಕಲಾವಿದರಾದ ರತ್ನದೇವ್ ಪುಂಜಾಲಕಟ್ಟೆ, ಉಮೇಶ್ ಮಜಲೋಡಿ, ಯಶೊದರ್ ನೆಲ್ಲಿಗುಡ್ಡೆ, ವಿನೋದ್ ರಾಜ್ , ವೆಂಕಟೇಶ್ ಕಕ್ಯಪದವು, ಶಿವರಾಜ್ , ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.ಲಕ್ಷ್ಮೀಶ ಕುಲಾಲ್, ಜಯರಾಜ ಅತ್ತಾಜೆ ನಿರ್ಮಾಣದ, ಯುವ ಕಲಾವಿದ ರಚನ್ ಆಲಾಡಿ ನಿರ್ದೇಶನ ದಲ್ಲಿ ಪದ್ದೈ ಬಂಗಾರ್ ತುಳು ಕಿರುಚಿತ್ರ ಶೀಘ್ರ ವೀಕ್ಷಣೆಗೆ ಲಭ್ಯವಾಗಲಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ