ವಿಟ್ಲ: ಹಿರಿಯ ಕಲಾವಿದ ರಂಗಕರ್ಮಿ ಮೋಹನ ಸೋನಾ ಅವರಿಗೆ ನುಡಿನಮನ ಕಾರ್ಯಕ್ರಮ ಕನ್ನಡ ಸಂಘ ವಿಟ್ಲ ವತಿಯಿಂದ ವಿಠಲ ಪ್ರೌಢ ಶಾಲೆಯಲ್ಲಿ ನಡೆಯಿತು.
ಈ ಸಂದರ್ಭ ಕನ್ನಡ ಸಂಘ ವಿಟ್ಲ ಗೌರವಾಧ್ಯಕ್ಷ ಅನಂತ ಕೃಷ್ಣ ಹೆಬ್ಬಾರ್ ಮಾತನಾಡಿ ಮೋಹನ ಸೋನಾ ಅವರು ಮುಗ್ಧ ಮನಸ್ಸಿನ, ಒಬ್ಬ ಕಲಾಕಾರ ಹಾಗೂ ರಂಗಕರ್ಮಿ ಯಾಗಿದ್ದರು. ಪ್ರಕೃತಿಯನ್ನೇ ರಂಗಭೂಮಿ ಮಾಡಿಕೊಂಡ ಒಬ್ಬ ಅದ್ಭುತ ನಾಟಕಕಾರ ಎಂದು ಕಂಬನಿ ಮಿಡಿದರು. ಕನ್ನಡ ಸಂಘ ವಿಟ್ಲ ಅಧ್ಯಕ್ಷರಾದ ಶಂಕರನಾರಾಯಣ ಪ್ರಸಾದ್ ಮಾತನಾಡಿ ಸರಕಾರದ ಸಾಮಾಜಿಕ ಕಾರ್ಯಕ್ರಮವಾದ ಸಾಕ್ಷರತಾ ಆಂದೋಲನ ಜನಜಾಗೃತಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಆ ಕಾಲಕ್ಕೆ ಆ ಕಾರ್ಯಕ್ರಮವನ್ನು ಸಮಾಜದ ಎಲ್ಲಾ ಜನರಿಗೆ ತಲುಪುವಂತೆ ಬೀದಿ ನಾಟಕ,ಹಾಡು ಇತ್ಯಾದಿ ಇತ್ಯಾದಿ ಗಳ ಮೂಲಕ ನಿರ್ವಹಿಸಿರುವ ಅವರ ಜಾಣ್ಮೆ ಅವಸ್ಮರಣೀಯ ಎಂದು ಹೇಳಿ ಅವರ ಆತ್ಮಕ್ಕೆ ಚಿರಶಾಂತಿ ಬಯಸಿದರು.
ಕಾರ್ಯಕ್ರಮದಲ್ಲಿ ಅವರ ಒಡನಾಡಿ ವಿಶ್ವನಾಥ ಗೌಡ, ಪ್ರಾಂಶುಪಾಲರಾದ ಆದರ್ಶ ಚೊಕ್ಕಾಡಿ, ಸೀತಾ ಲಕ್ಷ್ಮೀ ವರ್ಮಾ ಮತ್ತು ರಾಜಶೇಖರ್ ವಿಟ್ಲ ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…