ಬಂಟ್ವಾಳ

ಕರ್ಪೆ ಹಿಂದು ಜಾಗರಣಾ ವೇದಿಕೆಯಿಂದ ವಿಶೇಷ ಪೂಜೆ, ಸಂಕೀರ್ತನೆ

ಬಂಟ್ವಾಳ: ಹಿಂದು ಜಾಗರಣಾ ವೇದಿಕೆಯ ಕರ್ಪೆ ಘಟಕ ವತಿಯಿಂದ ವಿಶೇಷ ಪೂಜೆ, ರಾಮ ಭಜನೆ ಸಂಕೀರ್ತನೆ, ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ ಕರ್ಪೆ ಶ್ರೀರಾಮಾಂಜನೇಯ ಮಂದಿರದಲ್ಲಿ ಬುಧವಾರ ನಡೆಯಿತು.

ಜಾಹೀರಾತು

ಈ ವೇಳೆ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೌದ್ಧಿಕ್ ಪ್ರಮುಖ್ ಚಂದ್ರಶೇಖರ ಕೈಯಬೆ, ಅಯೋಧ್ಯೆ ಶ್ರೀರಾಮ ಜನ್ಮ ಭೂಮಿ ಪವಿತ್ರ ಜಾಗದಲ್ಲಿ ಇವತ್ತು ಐತಿಹಾಸಿಕ ವಾಗಿ ಜಗತ್ತೀನ ಅತೀ ಅದ್ಭುತವಾದ ಭವ್ಯ ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ ನೆರೆವೆರತ್ತೀರುವುದು,ನಮ್ಮೆಲ್ಲರ ಸೌಭಾಗ್ಯ ಎಂದರು.

ಹಿಂದು ಜಾಗರಣ ವೇದಿಕೆ ವಿಟ್ಲ  ತಾ.ಸಂಪರ್ಕ ಪ್ರಮುಖ್ ಅರುಣ್ ಸಜೀಪ  ಪ್ರಾಸ್ತಾವಿಕವಾಗಿ ಮಾತನಾಡಿ ಉಡುಪಿಯ ಪೇಜಾವರ ಸ್ವಾಮಿಜೀಗಳ ಪಾತ್ರವನ್ನು ಸ್ಮರಿಸಿದರು.ಸಿದ್ದಕಟ್ಟೆ ಪರಿಸರದಲ್ಲಿನ ಅಯೋಧ್ಯೆ ಕರಸೇವಕರಾದ ಗೋಪಾಲ ಗೌಡ ಕೊರ್ಯಾರು,ಓಬಯ ಗೌಡ ಮಂಚಕಲ್ಲು, ವಿಶ್ವನಾಥ ಶೆಟ್ಟಿಗಾರ್ ಸಂಗಬೆಟ್ಟು, ಯೋಗಿಶ್ ಶೆಟ್ಟಿಗಾರ್ ಉರಂಡಗೆ,ಸುಂದರ ಸಂಗಬೆಟ್ಟು, ಜನಾರ್ದನ ಗೌಡ ದೇವಸ,ವಾಸುದೇವ ಶೆಟ್ಟಿಗಾರ್ ಸಂಗಬೆಟ್ಟು ಅವರನ್ನು ಗೌರವಿಸಲಾಯಿತು. ಹಿ.ಜಾ.ವೇ ಜಿಲ್ಲಾ ಕಾರ್ಯದರ್ಶಿ ಚಂದ್ರ ಕಲಾಯಿ,ಹಿಂದು ಯುವವಾಹಿನಿ ಜಿಲ್ಲಾ ಸಯೋಂಜಕ  ಪ್ರಶಾಂತ್, ಹಿ.ಜಾ.ವೇ.ಕರ್ಪೆ ಘಟಕ ಅದ್ಯಕ್ಷ ನವೀನ ಪೂಜಾರಿ,ಶ್ರೀರಾಮಾಂಜನೆಯ ಮಂದಿರ ವ್ಯವಸ್ಥಾಪಕರಾದ ಡಾ.ರಾಮರಾಯ ಪ್ರಭು ದೋಟ, ಸ್ಥಳೀಯ ಬಿಜೆಪಿ ಮುಖಂಡರಾದ ರತ್ನಕುಮಾರ್ ಚೌಟ, ಸಂಗಬೆಟ್ಟು ಗ್ರಾ.ಪ .ಉಪಾಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ದೋಟ, ಸಂದೇಶ್ ಶೆಟ್ಟಿ ಸಿದ್ದಕಟ್ಟೆ, ಮಾದವ ಶೆಟ್ಟಿಗಾರ್, ಉಮೇಶ್ ಗೌಡ ಮಂಚಕಲ್ಲು, ಹಿ.ಜಾ.ವೇ ಉಪಾಧ್ಯಕ್ಷ ರಂಜಿತ್  ಪೂವಳ,ಪ್ರದಾನ ಕಾರ್ಯದರ್ಶಿ ತೇಜಾಸ್ ಮರ್ದೊಟ್ಟು,ಮತ್ತಿತರರು ಭಾಗವಹಿಸಿದ್ದರು. ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ,ಧನ್ಯವಾದವಿತ್ತರು.

ಜಾಹೀರಾತು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ