ಬಂಟ್ವಾಳ

ಹಡೀಲು ಜಮೀನಿನಲ್ಲಿ ಹಸಿರು, ಕೃಷಿ ಇಲಾಖೆ ಸಹಕಾರದಿಂದ ಬೇಸಾಯ

ಜಾಹೀರಾತು

ಸುಮಾರು 5 ಎಕ್ರೆ ವಿಸ್ತೀರ್ಣವುಳ್ಳ ಹಡೀಲು ಜಮೀನಿನಲ್ಲಿ ನಾಟಿಯಂತ್ರದ ಮೂಲಕ ಭತ್ತದ ನಾಟಿ ಕಾರ್ಯಕ್ರಮ ಮಾಡುವ ಕಾರ್ಯ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಕೊಯಿಲಗುತ್ತು ಎಂಬಲ್ಲಿ ರಾಘವೇಂದ್ರರಾವ್ ಜಮೀನಿನಲ್ಲಿ ನಡೆಯಿತು. 4 ವರ್ಷಗಳಿಂದ ಕೃಷಿ ಕೂಲಿ ಕಾರ್ಮಿಕದ ಕೊರತೆಯಿಂದ ಬೇಸಾಯ ಮಾಡದೆ ಕೃಷಿಭೂಮಿ ಹಡೀಲು ಭೂಮಿಯಾಗಿತ್ತು. ಈ ವರ್ಷ ಕೃಷಿ ಇಲಾಖೆ ಸಹಾಯಧನದಲ್ಲಿ ಎಂಒ4 ಅಧಿಕ ಇಳುವರಿಯ ತಳಿಬಿತ್ತನೆ ಬೀಜ, ಕೃಷಿ ಸುಣ್ಣ ಹಾಗೂ ಸಾವಯವ ಗೊಬ್ಬರವನ್ನು ವಿತರಿಸಲಾಗಿದೆ. ಬೆಳ್ತಂಗಡಿಯ ನಡ ಗ್ರಾಮದ ಪ್ರಗತಿಪರ ರೈತ ಪ್ರಭಾಕರ ಮಯ್ಯ ಈ ಸಂದರ್ಭ ಆಗಮಿಸಿ ಅನುಭವಗಳನ್ನು ಹಂಚಿಕೊಂಡರು. ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ಕೆ. ನಾರಾಯಣ ಶೆಟ್ಟಿ ತಾಂತ್ರಿಕ ಮಾಹಿತಿ ನೀಡಿದರು. ಸಹಾಯಕ ಕೃಷಿ ಅಧಿಕಾರಿ ನಾರಾಯಣ ನಾಯ್ಕ ಮೇಲುಗೊಬ್ಬರಗಳ ಬಳಕೆ, ಭತ್ತದ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಕುರಿತ ಮಾಹಿತಿ ನೀಡಿದರು. ಸ್ಥಳೀಯ ರೈತರಾದ ಹರ್ಷೇಂದ್ರ ಹೆಗ್ಡೆ ಮತ್ತಿತರರು ಈ ವೇಳೆ ಪೂರಕ ಮಾಹಿತಿಗಳನ್ನು ಪಡೆದುಕೊಂಡರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ