ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ಕಾರ್ಮೆಲ್ ಕಾಲೇಜ್ ಬಳಿ ಜನಸಾಮಾನ್ಯರ ಸಂಚಾರಕ್ಕೆ ಅಯೋಗ್ಯವಾಗಿದ್ದ ಮಣ್ಣು ರಸ್ತೆಗೆ ಸ್ಥಳೀಯರೇ ಹಣ ವ್ಯಯಮಾಡಿ ಕೆಂಪುಕಲ್ಲು ಹಾಸಿ ದುರಸ್ತಿಗೊಳಿಸಿದ್ದಾರೆ.
ಸುಮಾರು 100 ಮೀ.ಉದ್ದದ ಈ ಮಣ್ಣುರಸ್ತೆಯನ್ನು 50 ಸಾವಿರ.ರೂಪಾಯಿ ವೆಚ್ಚದಲ್ಲಿ ಕೆಂಪುಕಲ್ಲುಹಾಸಿ ಸಂಚಾರಕ್ಕೆ ಯೋಗ್ಯವನ್ನಾಗಿಸಲಾಗಿದೆ.ಲಾಕ್ ಡೌನ್ ಅವಧಿಯನ್ನು ಈ ರಸ್ತೆ ದುರಸ್ಥಿಗೆ ಸದುಪಯೋಗಪಡಿಸಿಕೊಂಡಿದ್ದು, ಸ್ಥಳೀಯ ಮೆಡಿಕಲ್ ಮಾಲೀಕ ಕಿರಣ್ ನೇತೃತ್ವದಲ್ಲಿ ನಡೆದ ಈ ರಸ್ತೆ ದುರಸ್ತಿಗೆ ಜನಾರ್ದನ ಹೊಳ್ಳ,ಇಂಜಿನಿಯರ್ ಕಿರಣ್ ಗೌಡ, ವಕೀಲ ಯಶವಂತ್ ಮೊದಲಾದವರು ಸಹಕರಿಸಿದರು.