ಪ್ರಮುಖ ಸುದ್ದಿಗಳು

COVID19UPDATE: 12 ಸಾವಿರದ ಗಡಿ ತಲುಪಿದ ವೈರಸ್ ಸೋಂಕಿತರ ಸಂಖ್ಯೆ

  • ಲಾಕ್ ಡೌನ್ ಸಡಿಲಿಕೆಯಾಗಿದೆ ಅಂದ್ರೆ ಕೊರೊನಾ ಹೋಗಿದೆ ಎಂದಲ್ಲ – ಜಿಲ್ಲಾಧಿಕಾರಿ ಹೇಳಿದ್ದೇನು?

ಬಂಟ್ವಾಳದ ಮೂವರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 49 ಮಂದಿಗೆ ಕೊರೊನಾ ಸೋಂಕು ಶನಿವಾರ ದೃಢಪಟ್ಟಿದೆ. ಇಂದು ರಾಜ್ಯದಲ್ಲಿ ಒಟ್ಟು 918 ಮಂದಿಗೆ ಸೋಂಕು ಧೃಡಪಟ್ಟರೆ, ಒಟ್ಟಾರೆಯಾಗಿ 11,923 ಮಂದಿಗೆ ಸೋಂಕು ತಗಲಿದಂತಾಗಿದೆ. ಇವರ ಪೈಕಿ 4441 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, 7287 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು ಇಡೀ ರಾಜ್ಯದಲ್ಲಿ 11 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದರೆ, ಇದುವರೆಗೆ ಮೃತಪಟ್ಟವರ ಸಂಖ್ಯೆ 191ಕ್ಕೇರಿದೆ. ಐಸಿಯುನಲ್ಲಿ 197 ಮಂದಿ ರಾಜ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 371 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಾಹೀರಾತು

ಇಂದು ಬೆಂಗಳೂರು ನಗರದಲ್ಲಿ 596, ದ.ಕದಲ್ಲಿ 49 ಮಂದಿಗೆ ಸೋಂಕು ತಗಲಿದ್ದು ಗೊತ್ತಾಗಿದೆ. ಬೆಂಗಳೂರಿನಲ್ಲೇ ಒಟ್ಟು ಸೋಂಕಿತರು 2531 ಆದರೆ, 1913 ಸಕ್ರಿಯ ಪ್ರಕರಣಗಳಿವೆ. ಉಡುಪಿಯಲ್ಲಿ ಇಂದು 14 ಪ್ರಕರಣಗಳು ಪತ್ತೆಯಾಗಿವೆ. ಉಡುಪಿಯೊಂದರಲ್ಲಿ 1139 ಮಂದಿಗೆ ಸೋಂಕು ತಗಲಿದ್ದರೆ, 99 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ ಜಿಲ್ಲೆಯಲ್ಲಿ ಒಟ್ಟು 184 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾಧಿಕಾರಿ ಹೇಳಿದ್ದೇನು?

ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100ರಷ್ಟು ಕಂಟೈನ್ಮೆಂಟ್ ವಲಯಗಳಿವೆ. ಇದನ್ನು ಮಾಡಿರುವುದು ನಿಮ್ಮ ಮತ್ತು ಸಮಾಜದ ಒಳಿತಿಗೆ ಮಾಡಿರುವುದು ಎಂದು ತಿಳಿದುಕೊಳ್ಳಬೇಕು. ಯಾರೂ ನಿಯಮ ಉಲ್ಲಂಘಿಸಿ ಓಡಾಡಬೇಡಿ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಎಚ್ಚರಿಸಿದ್ದಾರೆ.

ಈ ಕುರಿತು ವಿಡಿಯೋ ಸಂದೇಶ ನೀಡಿರುವ ಅವರು, ಲಾಕ್ ಡೌನ್ ತೆಗೆದ ಮೇಲೆ ಹಲವಾರು ಮಂದಿ ಕೋವಿಡ್ ಹೊರಟುಹೋಗಿದೆ ಎಂದು ತಿಳಿದುಕೊಂಡಂತಿದೆ. ಮನೆಯಿಂದ ಅವಶ್ಯವಿದ್ದರೆ ಮಾತ್ರ ಹೊರಬರಬೇಕು. ಹೋಂ ಕ್ವಾರಂಟೈನ್ ನಲ್ಲಿ ಇರುವವರು ಮನೆಯಲ್ಲಿ ಬೇರೆಯವರೊಂದಿಗೂ ಅಂತರ ಕಾಪಾಡಬೇಕು. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ಜಾಹೀರಾತು

ನಮ್ಮ ಜಿಲ್ಲೆಯಲ್ಲಿ ಜ್ವರ, ಕೆಮ್ಮು, ನೆಗಡಿ ಇದ್ದವರಿಗೂ ಸೋಂಕು ತಗಲುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿರುವ ಅವರು, ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.

49 ಪಾಸಿಟಿವ್: ದಕ್ಷಿಣ  ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇಂದು ಮಕ್ಕಳು, ವೃದ್ಧರು ಸೇರಿದಂತೆ ಬರೋಬ್ಬರಿ 49 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆಯಾಗಿದೆ. ಇವುಗಳ ಪೈಕಿ ಬಂಟ್ವಾಳ ತಾಲೂಕಿನ ಬಿ.ಕಸ್ಬಾ ಗ್ರಾಮದ ಬಾರೆಕಾಡು, ಅನಂತಾಡಿ ಪುಣಚದ ಪ್ರಕರಣಗಳೂ ಸೇರಿವೆ.

ಸೋಂಕಿತರ ಪೈಕಿ 14 ಮಂದಿ ವಿದೇಶದಿಂದ ಬಂದವರು, 10 ಮಂದಿ ಅನ್ಯ ರಾಜ್ಯಗಳಿಂದ ಬಂದವರು, ಐಎಲ್ಐ ಪ್ರಕರಣದ ಮೂವರು, ಎಸ್ ಎಆರ್ ಐ ಪ್ರಕರಣಗಳ ನಾಲ್ಕು ಮಂದಿ, ಅಂಡರ್ ಟ್ರೇಸಿಂಗ್ ಪ್ರಕರಣಗಳಲ್ಲಿನ ಆರು ಮಂದಿ ಸೇರಿದಂತೆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 22 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

ಜಾಹೀರಾತು

ವೆನ್ಲಾಕ್ ಕೋವಿಡ್ 19 ಆಸ್ಪತ್ರೆಯಲ್ಲಿದ್ದ 38 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜೂ.21 ಮತ್ತು 22ರಂದು ಸೌದಿ ಅರೇಬಿಯ ಮತ್ತು ದಮಾಮ್ನಿಂದ ಬಂದಿದ್ದ 11 ವರ್ಷದ ಬಾಲಕ, 41, 57 ವರ್ಷದ ಪುರುಷರು, 39 ವರ್ಷದ ಮಹಿಳೆ, ಜೂ.23ರಂದು ದುಬೈನಿಂದ ಬಂದಿದ್ದ 68 ವರ್ಷದ ವೃದ್ಧ, 56 ವರ್ಷದ ಮಹಿಳೆ, ಜೂ.19, 23ರಂದು ದುಬೈ, ಖತರ್ನಿಂದ ಆಗಮಿಸಿದ್ದ 57 ಮತ್ತು 23 ವರ್ಷದ ಮಹಿಳೆಯರು ಹಾಗೂ 58, 26, 27, 24 ವರ್ಷದ ಪುರುಷರು. ಜೂ.19ರಂದುಖತರ್ನಿಂದ ಆಗಮಿಸಿದ್ದ 32 ವರ್ಷದ ಪುರುಷ, ಜೂ.21ರಂದು ಶಾರ್ಜಾದಿಂದ ಆಗಮಿಸಿದ್ದ 41, 48 ವರ್ಷದ ಪುರುಷರಲ್ಲಿ ಸೋಂಕು ದೃಢಪಟ್ಟಿತ್ತು. ಇವರೆಲ್ಲರೂ ಕ್ವಾರಂಟೈನ್ನಲ್ಲಿ ಇದ್ದವರು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಶನಿವಾರ ಒಟ್ಟು 232 ವರದಿಗಳು ಪ್ರಯೋಗಾಲಯದಿಂದ ಬಂದಿದ್ದು, ಅವುಗಳಲ್ಲಿ 49 ಪಾಸಿಟಿವ್ ಆಗಿದ್ದರೆ, ಉಳಿದೆಲ್ಲವೂ ನೆಗೆಟಿವ್ ಆಗಿವೆ. ಹೊಸದಾಗಿ 175 ಮಂದಿಯ ಸ್ಯಾಂಪಲ್ನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಟ್ಟು 145 ಮಂದಿಯ ವರದಿ ಇನ್ನಷ್ಟೇ ಬರಲು ಬಾಕಿಯಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ