ಬಂಟ್ವಾಳ

ಕಾವಳಕಟ್ಟೆಯಲ್ಲಿ ಕಂಡಿತು ಅಚ್ಚ ಶ್ವೇತವರ್ಣದ ಹೆಬ್ಬಾವು!!

ಮಳೆಗಾಲದಲ್ಲಿ ಹೆಬ್ಬಾವುಗಳು ಮನೆಯೊಳಗೆ ಬರುವುದು ಹಳ್ಳಿ ಪ್ರದೇಶದಲ್ಲಿ ಸಾಮಾನ್ಯ. ಗುರುವಾರ ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಮನೆಯೊಂದಕ್ಕೆ ಪ್ರವೇಶಿಸಿದ ಬಿಳಿ ಬಣ್ಣದ ಹೆಬ್ಬಾವು ಹೀಗಿತ್ತು. 

ಜಾಹೀರಾತು

ಬಂಟ್ವಾಳ ತಾಲೂಕಿನ ಮನೆಯೊಂದಕ್ಕೆ ಗುರುವಾರ ಬಂದ ಹೆಬ್ಬಾವಿನ ಬಣ್ಣ ಬಿಳಿ. ಗುರುವಾರ ಕಾವಳಕಟ್ಟೆ ಎಂಬಲ್ಲಿ ನೌಶಾದ್ ಎಂಬವರ ಮನೆಯೊಂದಕ್ಕೆ ಬಿಳಿ ಬಣ್ಣದ ಹೆಬ್ಬಾವು ನುಗ್ಗಿತು. ಗಲಿಬಿಲಿಗೊಂಡ ಮನೆಯವರು ಕೂಡಲೇ ಅವರ ಸ್ನೇಹಿತ ಆಶೀಫ್ ಅವರಿಗೆ ಕರೆ ಮಾಡಿದಾಗ ಅವರು ಉರಗತಜ್ಞ ಸ್ನೇಕ್ ಕಿರಣ್ ಅವರನ್ನು ಸಂಪರ್ಕಿಸಿದರು. ಕೂಡಲೇ ಆಗಮಿಸಿದ ಸ್ನೇಕ್ ಕಿರಣ್ ಸ್ನೇಹಿತರಾದ ನಿತ್ಯಪ್ರಕಾಶ್ ಬಂಟ್ವಾಳ, ಶ್ರೀಪ್ರಸಾದ್ ಜೊತೆ ಅದನ್ನು ಹಿಡಿದು ವಲಯಾರಣ್ಯಾಧಿಕಾರಿ ಶ್ರೀಧರ್ ಅವರಿಗೆ ನೀಡಿದ್ದು, ಅದನ್ನು ಬಳಿಕ ಸುರಕ್ಷಿತವಾಗಿ ಮಂಗಳೂರು ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.