ಬಂಟ್ವಾಳ

ಕ್ವಾರಂಟೈನ್ ಗ್ರಾಮದಲ್ಲಿ ರೇಷನ್ ವಿತರಿಸಿದ ತಾಲೂಕು ಕಚೇರಿ ಸಿಬ್ಬಂದಿ

www.bantwalnews.com Editor: Harish Mambady

ಜಾಹೀರಾತು

ಕೋವಿಡ್  ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮ ಭಾಗಶಃ ಕ್ವಾರಂಟೈನ್ ನಲ್ಲಿದ್ದು, ಅದರಲ್ಲಿ ರೇಷನ್ ಅಂಗಡಿಯವರೂ ಸೇರಿರುವ ಕಾರಣ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್. ಆರ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ತಂಡ ಗ್ರಾಮದ ಜನರಿಗೆ ರೇಷನ್ ವಿತರಿಸುವ ಉಸ್ತುವಾರಿಯನ್ನು ಶುಕ್ರವಾರ ವಹಿಸಿಕೊಂಡಿತು.

ತುಂಬೆ ಸರಕಾರಿ ಶಾಲೆಯಲ್ಲಿ ಸುಮಾರು 350 ಮಂದಿಗೆ ರೇಷನ್ ಒದಗಿಸಲಾಯಿತು.  ಕ್ವಾರಂಟೈನ್ ಪ್ರದೇಶಗಳ ಮನೆ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಗ್ರಾಪಂ ನಿರ್ವಹಿಸಿತು. ಉಳಿದವರಿಗೆ ಶಾಲೆಯಲ್ಲಿ ರೇಷನ್ ವಿತರಣಾ ಕಾರ್ಯ ನಡೆಯಿತು. ಬಂಟ್ವಾಳ ತಾಲೂಕು ಕಚೇರಿಯ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮಲೆಕ್ಕಿಗರಾದ ಪ್ರಶಾಂತ್, ನಾಗರಾಜ್, ವಿಜೇತಾ, ಗ್ರಾಮಸಹಾಯಕರಾದ ರೂಪೇಶ್ ಸದಾನಂದ, ತೂಕ ಅಳತೆ, ವಿತರಣೆ ಸಹಿತ ಲೆಕ್ಕಪತ್ರವನ್ನು ನೋಡಿಕೊಳ್ಳುವ ಕಾರ್ಯವನ್ನು ನಡೆಸಿದರು. ಒಂದೆರಡು ದಿನಗಳಲ್ಲಿ ಇಡೀ ಗ್ರಾಮಕ್ಕೆ ರೇಷನ್ ವಿತರಣೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ