ಬಂಟ್ವಾಳ

ರಸ್ತೆಗಿಳಿಯುವ ಜನರಿಗೆ ಜಾಗೃತಿ ಮೂಡಿಸಿದ ತಹಶೀಲ್ದಾರ್, ಕಟ್ಟುನಿಟ್ಟಿನ ಎಚ್ಚರಿಕೆ

ಬಂಟ್ವಾಳ ಮಿನಿ ವಿಧಾನಸೌಧ ಸೋಮವಾರ ಹೀಗಿತ್ತು.,

ಜನಜಾಗೃತಿ ಮೂಡಿಸುತ್ತಿರುವ ತಹಶೀಲ್ದಾರ್ ರಶ್ಮಿ ಎಸ್.ಆರ್

ಸೋಮವಾರ ಬಸ್ಸುಗಳಿಲ್ಲದ ಬಸ್ ತಂಗುದಾಣ

ಬಂಟ್ವಾಳದಲ್ಲಿ ಸೋಮವಾರ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದ್ದು,  ತಹಶೀಲ್ದಾರ್ ರಶ್ಮಿ ಎಸ್.ಆರ್. ಕಾರ್ಯಾಚರಣೆಗಿಳಿದದ್ದು ವಿಶೇಷ.

ರಸ್ತೆಯಲ್ಲಿ ಓಡಾಡುತ್ತಿದ್ದ ಜನರಿಗೆ ಹಾಗೂ ಅಂಗಡಿ, ಮುಂಗಟ್ಟುಗಳನ್ನು ತೆರೆದವರು, ಗುಂಪುಗುಂಪಾಗಿ ಸೇರಿಸಿದವರಲ್ಲಿ ಜಾಗೃತಿ ಮೂಡಿಸಿ ಗಮನ ಸೆಳೆದರು.

ಜಾಹೀರಾತು

ಬಂಟ್ವಾಳ ತಾಲೂಕಿನ ಪ್ರಮುಖ ಪಟ್ಟಣವಾದ ಬಿ.ಸಿ.ರೋಡ್, ಫರಂಗಿಪೇಟೆ, ಕಲ್ಲಡ್ಕ, ವಿಟ್ಲ, ಮಾಣಿ, ಬಂಟ್ವಾಳ ಸಹಿತ ಹಲವು ಭಾಗಗಳಿಗೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಸೋಮವಾರ ಖುದ್ದು ತೆರಳಿ ನಿಷೇಧಾಜ್ಞೆಯ ಹಿನ್ನೆಲೆ ಹಾಗೂ ಜನರ ಸಹಕಾರದ ಅಗತ್ಯ ಕುರಿತು ತಿಳಿಹೇಳಿದರು. ಇನ್ನು ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಇದೇ ಮೊದಲ ಬಾರಿ ಬಂಟ್ವಾಳದ ಜನರು ಮಾಸ್ಕ್ ಧರಿಸಿ ಓಡಾಡುತ್ತಿದ್ದುದು ಗಮನ ಸೆಳೆಯಿತು. ಇಂದಿರಾ ಕ್ಯಾಂಟೀನ್ ಹೊರತುಪಡಿಸಿದರೆ, ಉಳಿದೆಲ್ಲಾ ಕ್ಯಾಂಟೀನ್, ಹೋಟೆಲ್ ಗಳು ಬಾಗಿಲು ಹಾಕಿದ್ದವು. ಮಿನಿ ವಿಧಾನಸೌಧ ಸೇರಿದಂತೆ ಸರಕಾರಿ ಕಚೇರಿಗಳಲ್ಲಿ ಬೆರಳೆಣಿಕೆಯಷ್ಟು ಜನರಿದ್ದರೆ, ಬ್ಯಾಂಕುಗಳು ಕನಿಷ್ಠ ವ್ಯವಹಾರ ನಡೆಸಿದವು. ಹಣ್ಣು, ತರಕಾರಿ, ಮಾಂಸದಂಗಡಿಗಳು ತೆರೆದಿದ್ದರೆ, ಕೆಲವೆಡೆ ವಿನಾ ಕಾರಣ ಗುಂಪುಗುಂಪಾಗಿ ಅಲೆದಾಡುತ್ತಿದ್ದ ಹಾಗೂ ಆಟವಾಡುತ್ತಿದ್ದ ತಂಡಗಳನ್ನು ಪೊಲೀಸರು ಮತ್ತು ತಹಶೀಲ್ದಾರ್ ಚದುರಿಸಿ, ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದರು. 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ