Pic: Venkatramana Pai Maani
ಬಂಟ್ವಾಳ ಸುತ್ತಮುತ್ತಲಿನ ಪರಿಸರದಲ್ಲಿ ಹಾಗೂ ತಾಲೂಕಿನ ಹಲವೆಡೆ ಗುರುವಾರ ಬೆಳಗಿನ ಜಾವ ಅನಿರೀಕ್ಷಿತವಾಗಿ ಮಳೆ ಸುರಿದು ತಂಪಾದ ವಾತಾವರಣ ಸೃಷ್ಟಿಯಾಗಲು ಕಾರಣವಾಯಿತು. ಆದರೆ ಅವೇಳೆಯಲ್ಲಿ ಬಂದ ಮಳೆಯಿಂದಾಗಿ ಕೃಷಿಕರು, ಅಡಕೆ ಬೆಳೆಗಾರರು ಕಂಗಾಲಾದರು. ಅಂಗಳದಲ್ಲಿ ರಾಶಿ ಹಾಕಿದ್ದ ಅಡಕೆ, ಕಾಳುಮೆಣಸುಗಳನ್ನು ಸುರಕ್ಷಿತವಾದ ಜಾಗದಲ್ಲಿರಿಸಲು ಹರಸಾಹಸಪಟ್ಟರು. ಮಳೆಯಿಂದಾಗಿ ಬೆಳಗ್ಗೆ ಸುಮಾರು 11 ಗಂಟೆವರೆಗೆ ಮೋಡ ಕವಿದ ವಾತಾವರಣ ಕಂಡುಬಂತು. ಮಧ್ಯಾಹ್ನದ ಬಳಿಕ ಪ್ರಖರ ಬಿಸಿಲು ಇಣುಕಿತು. ಬಂಟ್ವಾಳ, ಕಲ್ಲಡ್ಕ, ಸಿದ್ಧಕಟ್ಟೆ, ಮಾಣಿ, ಕನ್ಯಾನ ಸಹಿತ ಹಲವು ಪ್ರದೇಶಗಳಲ್ಲಿ ಮಳೆ ಸುರಿದಿದೆ.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…