ಪ್ರಮುಖ ಸುದ್ದಿಗಳು

ಕರ್ನಾಟದಲ್ಲಿ ಕಮಲ ಕಮಾಲ್, ಕಾಂಗ್ರೆಸ್ – ಜೆಡಿಎಸ್ ಮೈತ್ರಿಗೆ ಭಾರೀ ಹಿನ್ನಡೆ

10.45 AM ಘಟಾನುಘಟಿಗಳಿಗೆ ಹಿನ್ನಡೆ, ಸುಮಲತಾ ಮುನ್ನಡೆ

ಜಾಹೀರಾತು

ಈಗಿನ ಮುನ್ನಡೆ

ಒಟ್ಟು 28 ಬಿಜೆಪಿ 23, ಕಾಂಗ್ರೆಸ್ 3, ಜೆಡಿಎಸ್ 1, ಪಕ್ಷೇತರ 1

  • ಮಂಡ್ಯ = ನಿಖಿಲ್ 72474 ಸುಮಲತಾ ಅಂಬರೀಷ್ – 73558
  • ತುಮಕೂರು – ದೇವೇಗೌಡ 114459 ಜಿ.ಎಸ್.ಬಸವರಾಜು 125768
  • ಚಿಕ್ಕಬಳ್ಳಾಪುರ ಬಿ.ಎನ್.ಬಚ್ಚೇಗೌಡ 174290 ವೀರಪ್ಪ ಮೊಯ್ಲಿ 133072
  • ಬೆಂಗಳೂರು ಉತ್ತರ – ಡಿ.ವಿ.ಸದಾನಂದ ಗೌಡ 249613 ಕೃಷ್ಣ ಭೈರೇಗೌಡ 224523
  • ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ 179025 ಬಿ.ಕೆ.ಹರಿಪ್ರಸಾದ್ 90208
  • ಬೆಂಗಳೂರು ಸೆಂಟ್ರಲ್ – ರಿಜ್ವಾನ್ ಅರ್ಷದ್ 227018 ಪಿ.ಸಿ.ಮೋಹನ್ 201959
  • ಮೈಸೂರು – ಪ್ರತಾಪಸಿಂಹ – 78112, ಸಿ.ಎಚ್. ವಿಜಯಶಂಕರ್ 65566
  • ಉಡುಪಿ – ಶೋಭಾ ಕರಂದ್ಲಾಜೆ 72136, ಪ್ರಮೋದ್ 35253
  • ಉತ್ತರ ಕನ್ನಡ – ಅನಂತ ಕುಮಾರ ಹೆಗಡೆ – 241105 ಆನಂದ ಆಸ್ನೋಟಿಕರ್ 75057
  • ದಕ್ಷಿಣ ಕನ್ನಡ – ನಳಿನ್ ಕುಮಾರ್ ಕಟೀಲ್ 227752 ಮಿಥುನ್ ರೈ 144122

ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಈಗಾಗಲೇ ಕರ್ನಾಟಕದ ಒಟ್ಟಾರೆ ಮುನ್ನಡೆಯನ್ನು ನೋಡಿದಾಗ ಸಮ್ಮಿಶ್ರ ಸರಕಾರದ ಮಿತ್ರಪಕ್ಷಗಳು ಒಟ್ಟಾಗಿ ಚುನಾವಣೆ ಕಣಕ್ಕಿಳಿದರೂ ಬಿಜೆಪಿಯತ್ತ ಮತದಾರ ಗಮನಹರಿಸಿದ್ದಾರೆ.

ವಿಜಯಪುರದಲ್ಲಿ ಏಳು ಸುತ್ತಿನ ಮತ ಎಣಿಕೆ ನಂತರ ಕೇಂದ್ರ ಸಚಿವ ರಮೇಶ್‌ ಜಿಗಜಿಣಗಿ 40 ಸಾವಿರಕ್ಕಿಂತಲೂ ಹೆಚ್ಚು ಮತಗಳಿಂದ ಮುನ್ನಡೆದಿದ್ದಾರೆ.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್, ಕಲಬುರ್ಗಿಯಲ್ಲಿ ಜಾಧವ್ ಮುನ್ನಡೆಯಲ್ಲಿದ್ದರೆ, ಇಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲಿನ ಹಾದಿಯಲ್ಲಿದ್ದಾರೆ.

ಹಾನಸದಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ನಂತರ ಪ್ರಜ್ಞಲ್‌ 40 ಸಾವಿರಕ್ಕೂ ಹೆಚ್ಚು ಮತ ಗಳ ಅಂತರದಿಂದ ಮುನ್ನಡೆ ಪಡೆದಿದ್ದಾರೆ.  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಬಿಕೆ ಹರಿಪ್ರಸಾದ್‌ಗಿಂತ 50 ಸಾವಿರಕ್ಕಿಂತಲೂ ಹೆಚ್ಚು ಮತಗಳ ಅಂತರದ ಮುನ್ನಡೆ ಪಡೆದಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಎರಡನೇ ಸುತ್ತಿನ ಮತ ಎಣಿಕೆ ನಂತರ 22,305 ಮತಗಳ ಅಂತರದಿಂದ ಮುನ್ನಡೆ ಪಡೆದಿದ್ದಾರೆ.

ಒಟ್ಟು 28 ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳ ಮಾಹಿತಿ ಲಭ್ಯವಾಗಿದ್ದು, ಬಿಜೆಪಿ 22, ಕಾಂಗ್ರೆಸ್‌ 4, ಜೆಡಿಎಸ್‌ 2 ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿತ್ತು. ಕೋಲಾರದಲ್ಲಿ ಸೋಲಿಲ್ಲದ ಸರದಾರರಾಗಿದ್ದ ಕಾಂಗ್ರೆಸ್‌ ಸಂಸದ ಕೆ.ಎಚ್‌. ಮುನಿಯಪ್ಪ ಆರಂಭಿಕ ಹಿನ್ನಡೆ ಅನುಭವಿಸಿದ್ದಾರೆ. ಚಿಕ್ಕೋಡಿಯಲ್ಲಿ ಹಾಲಿ ಸಂಸದ ಪ್ರಕಾಶ್‌ ಹುಕ್ಕೇರಿಗೆ ಹಿನ್ನಡೆಯಾಗಿದೆ. ಬಿಜೆಪಿಯ ಅಣ್ಣಾ ಸಾಹೇಬ್‌ ಜೊಲ್ಲೆ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆ ಹೊಂದಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.