ಬಂಟ್ವಾಳ

ಯೂಸುಫ್ ನಬ್ಹಾನಿ ಅವರಿಗೆ ಎಪಿ ಉಸ್ತಾದರಿಂದ ವಿಶೇಷ ಪ್ರಶಸ್ತಿ

ಅಂತರ್ ರಾಷ್ಟ್ರೀಯ ಹೋಲಿ ಕುರ್‌ಆನ್ ಅವಾರ್ಡ್ ರಂಝಾನ್ ಪ್ರಭಾಷಣದಲ್ಲಿ ದುಬೈ ಜಿದ್ದಾಫ್ ಅಲ್ ವಸಲ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು, ಇರಾ ಗ್ರಾಮದ ಕುಕ್ಕಾಜೆ ನಿವಾಸಿ ಯೂಸುಫ್ ನಬ್ಹಾನಿ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರು ಪ್ರಶಸ್ತಿ ವಿತರಿಸಿದರು.

 

ಜಾಹೀರಾತು

ಈ ಸಂದರ್ಭ ಬಾಯಾರ್ ತಂಙಳ್, ತ್ವಾಹಾ ತಂಙಳ್, ಡಾ. ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಮೊದಲಾದವರು ಉಪಸ್ಥಿತರಿದ್ದರು. ಯೂಸುಫ್ ನಬ್ಹಾನಿ ಅವರು ಕಳೆದ ೧೫ ವರ್ಷಗಳಿಂದ ಕಾಸರಗೋಡು ದೇಳಿಯಲ್ಲಿರುವ ಜಾಮಿಯಾ ಸಅದಿಯಾ ವಿದ್ಯಾಸಂಸ್ಥೆಯ ಲೈಬ್ರರಿಗೆ ಮೌಲ್ಯಯುತ ಅರಬಿಕ್ ಇಸ್ಲಾಮಿಕ್ ಗ್ರಂಥಗಳನ್ನು ಪ್ರಾಯೋಜಕರ ಮೂಲಕ ಉಚಿತವಾಗಿ ನೀಡುತ್ತಾ ಬರುತ್ತಿದ್ದಾರೆ. ದುಬೈಯ ಜಾಮಿಯಾ ಸಅದಿಯಾ ಅರಬಿಯಾ ಇಂಡಿಯನ್ ಸೆಂಟರ್ ಯೂಸುಫ್ ನಬ್ಹಾನಿ ಅವರಿಗೆ ಈ ವಿಶೇಷ ಪ್ರಶಸ್ತಿಯನ್ನು ಪ್ರಾಯೋಜಿಸಿತು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ