ಸಾಂಸ್ಕೃತಿಕ

14ರಂದು ಕೂಡಿಯಾಟ್ಟಂ, ಭರತನಾಟ್ಯ ಪ್ರದರ್ಶನ

ಮಂಗಳೂರು: ನಗರದ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಮೇ 14ರಂದು ಕೂಡಿಯಾಟ್ಟಂ ಹಾಗೂ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸಂಜೆ 6 ಗಂಟೆಯಿಂದ 7ರವರೆಗೆ ಅಮ್ಮನೂರ್ ರಜನೀಶ್ ಚಾಕ್ಯಾರ್ ಮತ್ತು ಅಮ್ಮನೂರ್ ಮಾಧವ ಚಾಕ್ಯಾರ್ ತ್ರಿಶೂರ್ ಬಳಗದಿಂದ ಕೂಡಿಯಾಟ್ಟಂ (ಪ್ರಸಂಗ: ಕಲ್ಯಾಣ ಸೌಗಂಧಿಕಂ) ಪ್ರದರ್ಶನಗೊಳ್ಳಲಿದೆ.

ಜಾಹೀರಾತು

‘ಮಿಳವು’ ವಾದನದಲ್ಲಿ ಕಲಾಮಂಡಲಂ ರವಿ ಕುಮಾರ್ ಮತ್ತು ಕಲಾಮಂಡಲಂ ರಾಹುಲ್ ಸಹಕರಿಸಲಿದ್ದಾರೆ. ಸಂಜೆ 7ಗಂಟೆಯಿಂದ 8ರವರೆಗೆ ಮಂಗಳೂರಿನ ಕಲಾವಿದೆ ರಾಧಿಕಾ ಶೆಟ್ಟಿ ಏಕವ್ಯಕ್ತಿ ಭರತನಾಟ್ಯ(ಗೋಪಿಕಾ ಪ್ರಸಾರಣ) ಪ್ರಸ್ತುತಪಡಿಸಲಿದ್ದಾರೆ. ಕಲಾವಿದೆ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು (ನಟುವಾಂಗ), ಸ್ವರಾಗ್ ಮಾಹೆ (ಹಾಡುಗಾರಿಕೆ), ಬಾಲಚಂದ್ರ ಭಾಗವತ್ ಉಡುಪಿ (ಮೃದಂಗ), ನಿತೀಶ್ ಅಮ್ಮಣ್ಣಾಯ ಬೆಂಗಳೂರು (ಕೊಳಲು) ಹಿಮ್ಮೇಳದಲ್ಲಿ ಸಹಕರಿಸುವರು. ಕಲಾಸಕ್ತರಿಗೆ ಉಚಿತ ಪ್ರವೇಶ ಎಂದು ಪ್ರಕಟಣೆ ತಿಳಿಸಿದೆ.

Contact: 9845091838 or email: radhikarecitals@gmail.com

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.