ಪೆರುವಾಯಿಂದ ಮನೆಗೆ ನಡೆದು ಬರುತ್ತಿದ್ದ ಸಮಯ ಪೆರುವಾಯಿ ಗ್ರಾಮದ ಮುಚ್ಚಿರಪದವು ನಿವಾಸಿಗಳಾದ ನಾರಾಯಣ ಪೂಜಾರಿ, ಚಂದ್ರಾವತಿ, ಮಕ್ಕಳಾದ ಅವಿನಾಶ್, ಯಶವಂತ ಅವರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಿಂದ ಗಾಯಗೊಂಡವರಾಗಿದ್ದಾರೆ. ನಾರಾಯಣ ಪೂಜಾರಿ ಅವರು ಕೂಲಿ ಕೆಲಸ ಮಾಡಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದು, ಬಡ ಕುಟುಂಬಕ್ಕೆ ಈ ಅಪಘಾತದಿಂದ ಆಸ್ಪತ್ರೆ ಚಿಕಿತ್ಸೆಗೆ ಹಣ ಹೊಂದಾಣಿಕೆ ಮಾಡಲು ಪರದಾಡುವಂತಾಗಿದೆ.
ಸದ್ಯ ಚಂದ್ರಾವತಿ ಹಾಗೂ 4 ನೇ ತರಗತಿಯ ಯಶವಂತ ಅವರು ಮಂಗಳೂರು ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ದಾನಿಗಳ ಸಹಾಯ ಬೇಕಾಗಿದೆ. ದಾನಿಗಳು ಯಶವಂತ ಅವರ ಹೆಸರಿನಲ್ಲಿರುವ ಕರ್ನಾಟಕ ಬ್ಯಾಂಕ್ ಮಾಣಿಲ ಶಾಖೆಯ ಉಳಿತಾಯ ಖಾತೆ ಸಂಖ್ಯೆ 5022500100482601 ಗೆ ಹಣವನ್ನು ಜಮಾ ಮಾಡವಹುದಾಗಿದೆ. 9902636584 ನಂಬರ್ ಅನ್ನು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾಗಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)