ಬಂಟ್ವಾಳ

ಲೇಖಕಿ ಅನಿತಾ ನರೇಶ್ ಮಂಚಿ ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ವೈವಿಧ್ಯ

ಲೇಖಕಿ ಅನಿತಾ ನರೇಶ್ ಮಂಚಿ ಬರೆದ ಎರಡು ಪುಸ್ತಕಗಳು ಮಂಚಿಯ ಲೇಖಕಿಯ ಮನೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡವು.

Pic: Ram Naresh Manchi

ಕಥಾಸಂಕಲನ ‘ನೈಲಾ’ ಮತ್ತು ವಿಜಯವಾಣಿ ಪತ್ರಿಕೆಯ ಅಂಕಣ ಬರಹಗಳ ಸಂಗ್ರಹ ‘ಮಹತಿ’ ಪುಸ್ತಕಗಳನ್ನು ಡಾ. ಸುರೇಖಾ ರವಿಶಂಕರ್ ಮತ್ತು ವೀಣಾ ಅನಂತ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಡಾ. ಸುಲೇಖಾ ಜೀವನದ ದಾರಿ ಚೆಂದವೆಂದು ಮೈಮರೆತು ಕುಳಿತುಕೊಳ್ಳುವಂತಿಲ್ಲ. ಸಾಧಿಸಬೇಕಾದದ್ದು ಇನ್ನಷ್ಟು ಇದೆ ಎಂಬ ಎಚ್ಚರ ಅಗತ್ಯ ಎಂದರು.

ಜಾಹೀರಾತು

ಕಾರ್ಯಕ್ರಮವನ್ನು ಕೊಮ್ಮೆ ತಿಮ್ಮಣ್ಣ ಭಟ್ ಉದ್ಘಾಟಿಸಿದರು. ಮೇಘಾ ಕಾಯರ್ಪಾಡಿ ಪ್ರಾರ್ಥಿಸಿದರು. ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ಟರು ಭಕ್ತ ಸುದಾಮ ಹರಿಕಥೆ ನಡೆಸಿಕೊಟ್ಟರು. ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ ಮದ್ದಳೆಯಲ್ಲಿ ಸಹಕರಿಸಿದರು. ರೇಷ್ಮಾ ನರಸಿಂಹ ಕಜೆ, ಪ್ರಮೀಳಾ ಕೊಳಕೆ, ಮೇಘಾ ಕಾಯರ್ಪಾಡಿ, ಕೃತ್ತಿಕಾ ಮತ್ತು ಪಂಚಮಿ ಲಘು ಸಂಗೀತ, ಕಿಶೋರ್ ಭಟ್ ಕೊಮ್ಮೆ ಅವರಿಂದ ಯಕ್ಷಗಾನ ಹಾಡುಗಳು ಪ್ರಸ್ತುತಗೊಂಡವು. ರಾಜೇಂದ್ರಕೃಷ್ಣ ಪಂಜಿಗದ್ದೆ ಮತ್ತು ಗಣೇಶ ಭಟ್ ಬೆಳಾಲು ಸಹಕರಿಸಿದರು. ಅಭಿಲಾಷಾ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ