ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷರಾಗಿ ಜವಳಿ ಉದ್ಯಮಿ ಶೇಖರ್ ಅಂಚನ್ ಪಿಲ್ಕಾಜೆಗುತ್ತು ಆಯ್ಕೆಯಾಗಿದ್ದಾರೆ. ನಾರಾಯಣ ಗುರು ಮಂದಿರ ಕುದ್ಮಾಣಿಯಲ್ಲಿ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ ಅವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಸರ್ವಾನುಮತದಿಂದ ನಡೆಯಿತು. ಕಾರ್ಯದರ್ಶಿಯಾಗಿ ಸಂತೋಷ್ ಬಂಗೇರ ಶಾಂತಿಪಲ್ಕೆ, ಕೋಶಾಧಿಕಾರಿಯಾಗಿ ರಮೇಶ್ ಪೂಜಾರಿ ಕುದ್ಕೋಳಿ ಇವರನ್ನು ನೇಮಿಸಲಾಯಿತು.