ಬಂಟ್ವಾಳ

ಜುಲಾಯಿ, ಆಗಸ್ಟ್ ಗೌರವಧನ ಪಾವತಿಸದಿದ್ದರೆ ಅಂಗನವಾಡಿ ಬಂದ್

ಜುಲಾಯಿ ಹಾಗೂ ಆಗಸ್ಟ್ ತಿಂಗಳ ಗೌರವಧನವನ್ನು ಶೀಘ್ರವೇ ಪಾವತಿಸದಿದ್ದಲ್ಲಿ ಅಂಗನವಾಡಿ ಬಂದ್ ಗೊಳಿಸಿ ಮುಷ್ಕರ ನಡೆಸಲು ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ಎಚ್ಚರಿಸಿದೆ.

ಜಾಹೀರಾತು

ಜುಲೈ ಹಾಗೂ ಆಗಸ್ಟ್ ತಿಂಗಳ ಗೌರವಧನ ಪಾವತಿಯಾಗದೇ ಇರುವುದರಿಂದ ಅತ್ಯಲ್ಪ ಗೌರವಧನದಲ್ಲಿ ಜೀವನ ಸಾಗಿಸಲು  ಕಷ್ಟವಾಗುತ್ತಿದೆ. ಸಮಯಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಸೆಪ್ಟೆಂಬರ್ 25 ತಾರೀಖಿನೊಳಗೆ ಬ್ಯಾಂಕ್ ಖಾತೆಗೆ ಗೌರವ ಧನ ಜಮಾ ಆಗದಿದ್ದರೆ ಮಾಸಿಕ ವರದಿ ಸಲ್ಲಿಕೆಯನ್ನು ತಡೆ ಹಿಡಿಯಲು ನಿರ್ಧರಿಸುವುದಾಗಿ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಸೆ. 24ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನಡೆದ ಕುಂದು ಕೊರತೆ ನಿವರಣ ಸಭೆಯಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಲಾಗಿದ್ದು ಮುಂದಿನ ಅಕ್ಟೋಬರ್ 5 ನೇ ತಾರೀಖಿನೊಳಗೆ ಬಾಕಿಯಿರುವ ಎಲ್ಲಾ ಗೌರವಧನ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬ್ಯಾಂಕ್ ಖಾತೆಗೆ ಜಮೆಯಾಗದಿದ್ದಲ್ಲಿ ಅಂಗನವಾಡಿಗಳನ್ನು ಬಂದ್‌ಗೊಳಿಸಿ ಮುಷ್ಕರ ಆರಂಭಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.