ಕರ್ನಾಟಕ ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಖಾತೆ ಸಚಿವರಾಗಿ ಆಯ್ಕೆಯಾದ ಯು.ಟಿ. ಖಾದರ್ ಅವರ ವಿಜಯೋತ್ಸವವನ್ನು ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ಶ್ರಮ ದಾನ ಮಾಡುವ ಮೂಲಕ ಆಚರಿಸಿದರು.
ತುಂಬೆ ಗ್ರಾಮ ಮತ್ತು ಬಿ.ಸಿ.ರೋಡ್ ಓವರ್ ಬ್ರಿಡ್ಜ್ ಹಾಗೂ ಸರ್ಕಲ್ ಬಳಿ ರಸ್ತೆಯಲ್ಲಿದ್ದ ಹೊಂಡಗಳಿಗೆ ಕಲ್ಲು ಹಾಕಿ ದುರಸ್ತಿ ಮಾಡಲಾಯಿತು.
ಜವಾನ್ ಫ್ರೆಂಡ್ಸ್ ಅಧ್ಯಕ್ಷ ರಿಯಾಝ್ ಜವಾನ್ ಅಧ್ಯಕ್ಷತೆಯಲ್ಲಿ ದುರಸ್ತಿ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಜವಾನ್ ಫ್ರೆಂಡ್ಸ್ ಉಪಾಧ್ಯಕ್ಷ ಸತ್ತಾರ್ ನಂದರಬೆಟ್ಟು, ಕಾರ್ಯದರ್ಶಿ ಆಶಿಕ್ ಕುಕ್ಕಾಜೆ, ನವಾಝ್ ಕೈಕಂಬ, ಕೋಶಾಧಿಕಾರಿ ಯೂನುಸ್ ನೌಫಲ್, ಎನ್ನಾರೈ ಸದಸ್ಯ ಜುನೈದ್ ಮಂಡಾಡಿ, ಬಶೀರ್ ಪರ್ಲಿಯಾ, ಸಾಮಾಜಿಕ ಕಾರ್ಯಕರ್ತರಾದ ಸಮದ್ ಕೈಕಂಬ, ಮುಸ್ತಫಾ ಎ.ಆರ್. ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ