ಕವರ್ ಸ್ಟೋರಿ

ಎಲ್ಲವೂ ಇದೆ… ಆದ್ರೆ ಬಸ್ಸೇ ಇಲ್ವಲ್ಲ!!

www.bantwalnews.com

ಚಿತ್ರ- ವರದಿ: ಯಾದವ ಕುಲಾಲ್

ಜಾಹೀರಾತು

 

ವಾಹನ ಇದ್ದವರು ಅದ್ರಲ್ಲಿ ಹೋಗ್ತಾರೆ, ಇಲ್ಲದಿದ್ದವರು ಏನು ಮಾಡ್ತಾರೆ?

ಯಾರದ್ದಾದರೂ ವಾಹನ ಸಿಗುತ್ತಾ ಅಂತ ಕಾಯ್ತಾರೆ, ಇಲ್ಲವಾದರೆ ಸರ್ವೀಸ್ ವಾಹನ ಉಂಟಾ ಎಂದು ನೋಡ್ತಾರೆ. ಯಾಕಂದರೆ ಇಲ್ಲಿ ಬಸ್ಸುಗಳೇ ಓಡಾಡುವುದಿಲ್ಲ.

ನೂರಾರು ಮನೆಗಳು, ಭಜನಾ ಮಂದಿರ, ಚರ್ಚ್, ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆ, ಅಂಬೇಡ್ಕರ್ ಭವನ, ವಿದ್ಯುತ್ ಕಂಬಗಳು, ಡಾಂಬರು ಹಾಕಿದ ಅದ್ಭುತ ರಸ್ತೆ.. ಎಲ್ಲವೂ ಇಲ್ಲಿವೆ. ಆದರೆ ಓಡಾಡಲು ಸಾರ್ವಜನಿಕ ಸಾರಿಗೆಯಾದ ಬಸ್ಸೇ ಇಲ್ಲ.

ಸ್ಥಿತಿ ಇರುವುದು ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಅಜೆಕಲ-ಕೆಂಪುಗುಡ್ಡೆ-ಕಲ್ಪನೆ ಭಾಗದಲ್ಲಿ.

ಕೆಂಪುಗುಡ್ಡೆ, ಕಾಯರ್ಮಾರ್, ಬಾಂಬಿಲ, ನಲ್ಕೆಮಾರ್, ಮಂಗ್ಲಿಮಾರ್ ಇತ್ಯಾದಿ ಊರುಗಳಿಂದ ಬಂಟ್ವಾಳ ಪೇಟೆಗೆ ಹೋಗಲು ಈ ರಸ್ತೆಯೇ ಬೇಕು.

ಪ್ರೌಢ ಶಿಕ್ಷಣ, ಕಾಲೇಜು ಶಿಕ್ಷಣ, ಐಟಿಐ, ಡಿಪ್ಲೋಮಾಗಳಂತಹ ಕೋರ್ಸುಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಬಂಟ್ವಾಳ ಬೈಪಾಸ್ ಮಾರ್ಗವಾಗಿಯೇ ತಮ್ಮ ಕಾಲೇಜುಗಳಿಗೆ ಹೋಗಬೇಕು.

 ಅಜೆಕಲಕೆಂಪುಗುಡ್ಡೆಕಲ್ಪನೆ ರಸ್ತೆ ಕಾಮಗಾರಿಗೆ ಕೇಂದ್ರೀಯ ರಸ್ತೆ ನಿಧಿಯಡಿ 4 ಕೋಟಿ ರೂ ಅನುದಾನದಲ್ಲಿ ಸುಸಜ್ಜಿತ ರಸ್ತೆಯಾಗಿದೆ. ನಾಮಫಲಕ ಇತ್ಯಾದಿ ಎಲ್ಲವೂ ಹಾಕಲಾಗಿದೆ.

8 ಕಿ.ಮೀ ಸಾಗಿದರೆ ಕಲ್ಪನೆ, ಅಲ್ಲಿಂದ ಬೆಂಜನಪದವು ಮಾರ್ಗವಾಗಿ ನೀರುಮಾರ್ಗಮಂಗಳೂರು, ಫರಂಗಿಪೇಟೆಮಂಗಳೂರು ತಲುಪಬಹುದು. ಅದೇ ರೀತಿ ಪುಣ್ಯ ಕ್ಷೇತ್ರಗಳಾದ ಪೊಳಲಿ, ಕಟೀಲು ತಲುಪಬಹುದು. ಪರ್ಯಾಯ ಮಾರ್ಗವಾಗಿ ಬಜಪೆ ವಿಮಾನ ನಿಲ್ದಾಣವನ್ನು ತಲುಪಲು ರಸ್ತೆಯನ್ನು ಬಳಸಬಹುದು. ಧರ್ಮಸ್ಥಳ, ಸರಪಾಡಿ, ವಾಮದಪದವು ಹಾಗೂ ಬಂಟ್ವಾಳದ ಸುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಬಿ.ಸಿ.ರೋಡು ಹೋಗುವ ಬದಲು ಈ ರಸ್ತೆ ಅವಲಂಬಿಸಲು ಸಾಧ್ಯ.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.