ವಿಟ್ಲ

ಸುಜ್ಞಾನದ ನೇತ್ರವರಳಿಸುವ ಕಾರ್ಯ ಗುರುಚರಿತ್ರೆಯಿಂದ: ಒಡಿಯೂರು ಶ್ರೀಗಳು

ಚಿತ್ರ: ಕ್ಲಿಕ್ ಪಾಯಿಂಟ್ ಕನ್ಯಾನ

ಅಂತರಂಗದಲ್ಲಿ ಆನಂದವನ್ನು ಅನುಭವಿಸುವುದಕ್ಕೆ ಸಿದ್ಧತೆ ಬೇಕು. ಜೀವನದ ಉದ್ಧಾರಕ್ಕೆ ಆನಂದ ರಸ ಅವಶ್ಯಕ. ಇದನ್ನು ಅನುಭವಿಸುವುದನ್ನೇ ಆನಂದ ಪರಂಪರೆ ಎಂದರು. ಅಜ್ಞಾನದ ಕತ್ತಲನ್ನು ನಿವಾರಿಸಿ ಸುಜ್ಞಾನದ ಕಣ್ಣನ್ನು ಅರಳಿಸುವ ಕೆಲಸ ಗುರುಚರಿತ್ರೆ ಮಾಡುತ್ತದೆ. ಮನಸ್ಸಿನ ಪರಿವರ್ತನೆಯನ್ನೂ ಪ್ರವಚನದ ಮೂಲಕ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಸೂರ್ಯನನ್ನೇ ಗುರುವಾಗಿ ಸ್ವೀಕರಿಸಿದ ಶ್ರೀಗುರುದತ್ತಾತ್ರೇಯರು ಧರ್ಮಸೂತ್ರದಲ್ಲಿ ಜೀವನ ಸಾಗಿಸುವ ವಿಧಾನವನ್ನು ಬೋಧಿಸಿದರು. ಜಗತ್ತಿನ ಸಕಲ ಜೀವರಾಶಿಗಳಿಗೆ ಜೀವ ತುಂಬಿಸುವ ಸೂರ್ಯ ಸಮುದ್ರದ ಉಪ್ಪು ನೀರನ್ನೇ ಸಿಹಿಯಾಗಿಸಿ ಮಳೆಯ ರೂಪದಲ್ಲಿ ಇಳೆಗೆ ತಂಪೆರೆಯುವನು. ಹಾಗೆಯೇ ಪ್ರತಿಯೊಂದರಲ್ಲಿಯೂ ನಾವು ಕಲಿಯುವವಂತಹದ್ದು ಬಹಳಷ್ಟಿದೆ. ಗುರುತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಅರ್ಥಪೂರ್ಣವಾಗಿಸಿಕೊಂಡಾಗ ಜೀವನದಲ್ಲಿ ಸಾರ್ಥಕತೆಯನ್ನು  ಪಡೆಯಬಹುದು” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತಜಯಂತಿಯ ಸುಸಂದರ್ಭ ಆಯೋಜಿಸಿದ್ದ ಶ್ರೀ ಗುರುಚರಿತ್ರೆ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮಲಾರು ಜಯರಾಮ ರೈ ಶ್ರೀ ಗುರುಚರಿತ್ರೆ ಪ್ರವಚನಗೈದರು.

 

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.