ಬಂಟ್ವಾಳ

ಮಾತೃಪೂರ್ಣ ಯೋಜನೆ ಮಾರ್ಪಾಟು: ತಾಪಂ ಸಭೆ ನಿರ್ಣಯ


 ಬಹುನಿರೀಕ್ಷಿತ ಮಾತೃಪೂರ್ಣ ಯೋಜನೆ ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿತಲುಪಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಹಿಂದಿನ ಮಾದರಿಯನ್ನು ಅನುಸರಿಸುವಂತೆ ಯೋಜನೆಯಲ್ಲಿ ಮಾರ್ಪಾಟು ಮಾಡಬೇಕೆಂದು ಸರಕಾರವನ್ನು ಒತ್ತಾಯಿಸಿ ಗುರುವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತು.

 ಯೋಜನೆಯಿಂದ ಗರ್ಭಿಣಿಯರು, ಬಾಣಂತಿಯರು ಅಂಗವಾಡಿಗೆ ತೆರಳಿ ಪೌಷ್ಠಿಕಾಂಶ ಸ್ವೀಕರಿಸುವುದು ಸಾಧ್ಯವಿಲ್ಲ. ಇದು ಅವರಿಗೆ ತ್ರಾಸದಾಯಕವಾಗಿದೆ. ..ಜಿಲ್ಲೆಗೆ ಯೋಜನೆ ಸೂಕ್ತವಲ್ಲ ಎಂದು ಸದಸ್ಯ ರಮೇಶ್ ಕುಡ್ಮೇರು ಸಭೆಯ ಗಮನ ಸೆಳೆದರು.

ಜಾಹೀರಾತು

 ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒ ಸುಧಾ ಜೋಷಿ ಅವರು ತಾಲೂಕಿನಲ್ಲಿ ಬಹುತೇಕ ಅಂಗವಾಡಿ ಕೇಂದ್ರದಲ್ಲಿ .೨ರಿಂದಲೇ ಯೋಜನೆ ಕಾರ್ಯಗತವಾಗಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಗುರಿತಲುಪಲು ಸಾಧ್ಯವಾಗುತ್ತಿಲ್ಲ. ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

 ಸುದೀರ್ಘ ಚರ್ಚೆಯ ಬಳಿಕ ಯೋಜನೆಯಲ್ಲಿ ಮಾರ್ಪಾಟುಗೊಳಿಸುವಂತೆ ಒತ್ತಾಯಿಸಿ ಜಿ.ಪಂ. ಮೂಲಕ ಸರಕಾರದ ಗಮನಕ್ಕೆ ತರಲು ನಿರ್ಧರಿಸಲಾಯಿತು.

 ಆಹಾರ ಇಲಾಖೆ ವಿಚಾರಕ್ಕೆ ಸಂಬಂಧಿಸಿ ಇಂಟರ್ನೆಟ್ ಸೌಲಭ್ಯ ದೊರಕದ ಗ್ರಾಮಗಳನ್ನು ಗುರುತಿಸಿ ಪಟ್ಟಿ ನೀಡುವಂತೆ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಆಹಾರ ಪೂರೈಕೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಕೊನೆಗೆ ಆಹಾರ ಸಚಿವರು ಜಿಲ್ಲೆಯವರೇ ಆಗಿರುವುದರಿಂದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತಾಲೂಕು ಪಂಚಾಯತ್ ಸದಸ್ಯರನ್ನೊಳಗೊಂಡ ನಿಯೋಗ ತೆರಳಲು ನಿರ್ಧರಿಸಲಾಯಿತು.

 ಕಟ್ಟಡ ತೆರವಿಗೆ ತಡೆ:

ಬಿ.ಸಿ.ರೋಡಿನಲ್ಲಿ ಹಳೆ ತಾಲೂಕು ಪಂಚಾಯತ್ ಕಟ್ಟಡವನ್ನು ತೆರವುಗೊಳಿಸುವ ಪ್ರಸ್ತಾಪಕ್ಕೆಜಿಲ್ಲಾ ಪಂಚಾಯತ್ ನ್ಯಾಯಲಯದಲ್ಲಿ ತಡೆಯಾಜ್ಞೆ ದೊರೆತಿದೆ. ಕಟ್ಟಡ ತೆರವಿಗೆ ಸಾಧ್ಯವಿದೆಯೇ ಎಂದು ಸದಸ್ಯರಾದ ಉಸ್ಮಾನ್ ಕರೋಪಾಡಿ, ಯಶವಂತ ಪೂಜಾರಿ, ರಮೇಶ್ ಕುಡ್ಮೇರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಹಣಾ ಅಧಿಕಾರಿ ಸಿಪ್ರಿಯಾನ್ ಮಿರಾಂದ ಅವರು, ಅದರ ಬಗ್ಗೆ ನಮ್ಮ ವಕೀಲರು ವಾದ ಮಂಡಿಸುತ್ತಾರೆ, ಈಗಾಗಲೆ ಕಟ್ಟಡ ತೆರವಿಗೆ ಟೆಂಡರ್ ಕರೆಯಲಾಗಿದ್ದು, ಆಪ್ರಕ್ರಿಯೆ ನಡೆಯಲಿದೆ. ಕಟ್ಟಡದಲ್ಲಿ ಕಾರ್ಯಾಚರಿಸುವ ಅಂಗಡಿ ಮಾಲಕರಿಗೆ ಇದರ ಉದ್ದೇಶವನ್ನು ಮೊದಲೇ ತಿಳಿಸಲಾಗಿದೆ ಎಂದರೆ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವಾಗ ಕೆಲವೊಂದು ಅಡೆತಡೆಗಳು ಸಹಜ. ಸದಸ್ಯರು ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸುವಂತೆ ಉಪಾಧ್ಯಕ್ಷ ಅಬ್ಬಾಸ್ ಅಲಿ ಮನವಿ ಮಾಡಿದರು.

ತಾಲೂಕಿನಲ್ಲಿ .ಜಾ., ಪಂಗಡ, ಕೊರಗರ ಕಾಲನಿಗಳ, ವಾಸ್ತವ್ಯವಿರುವ ಕುಟುಂಬಗಳ ನಿಖರವಾದ ಅಂಕಿ ಅಂಶದೊಂದಿಗೆ ವಿಸ್ತೃತವಾದ ವರದಿಯನ್ನು ಸಮಾಜ ಕಲ್ಯಾಣ ಇಲಾಖೆ ತಾಲೂಕು ಪಂಚಾಯತ್ಗೆ ಒದಗಿಸಬೇಕೆಂದು ಸದಸ್ಯ ಪ್ರಭಾಕರ್ ಪ್ರಭು ಅವರು ಸಲಹೆ ನೀಡಿದರು.

 ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಸದಸ್ಯರಾದ ಪದ್ಮಶ್ರೀ, ಗೀತಾ ಚಂದ್ರಶೇಖರ್, ಹೈದರ್ ಕೈರಂಗಳ, ಆದಂ ಕುಂಞಿ, ಕುಮಾರ ಭಟ್, ಮಹಾಬಲ ಆಳ್ವ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ ವೇದಿಕೆಯಲ್ಲಿದ್ದರು. ಕಾರ್ಯನಿರ್ವಹಣಾ ಅಧಿಕಾರಿ ಸಿಪ್ರಿಯಾನ್ ಮಿರಾಂದ ಸ್ವಾಗತಿಸಿ, ವಂದಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.