ಬಂಟ್ವಾಳ

ನಿಂತಿದ್ದ ಬಸ್ಸುಗಳಿಗೆ ಹೊಯ್ಗೆ ಟಿಪ್ಪರ್ ಡಿಕ್ಕಿ

ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಪೆಟ್ರೋಲ್ ಪಂಪ್ ನಲ್ಲಿ ನಿಂತಿದ್ದ ನಾಲ್ಕು ಬಸ್ಸುಗಳಿಗೆ ಭಾನುವಾರ ಬೆಳಗ್ಗೆ ಸುಮಾರು 5.45ರ ಬಳಿಕ ವೇಗವಾಗಿ ಬರುತ್ತಿದ್ದ ಮರಳು ಸಾಗಾಟದ ಟಿಪ್ಪರ್ ಡಿಕ್ಕಿ ಹೊಡೆದು ಆತಂಕಕ್ಕೆ ಕಾರಣವಾಯಿತು.

ಜಾಹೀರಾತು

ಈ ಪೆಟ್ರೋಲ್ ಪಂಪ್ ಪಕ್ಕದಲ್ಲಿ ಬಸ್ಸುಗಳು ರಾತ್ರಿ ತಂಗುತ್ತವೆ. ಪಕ್ಕದಲ್ಲೇ ಪೆಟ್ರೋಲ್ ತುಂಬುವ ಜಾಗವಿದೆ. ಒಂದು ವೇಳೆ ಟಿಪ್ಪರ್ ಅಲ್ಲೇನಾದರೂ ಬಂದು ನುಗ್ಗಿ ಡಿಕ್ಕಿ ಹೊಡೆದಿದ್ದರೆ ಭೀಕರ ಅನಾಹುತವೇ ಕಾದಿತ್ತು. ಸಮೀಪದಲ್ಲಿ ಹಲವಾರು ಮನೆ, ಅಂಗಡಿಗಳು ಇದ್ದು, ಅವುಗಳಿಗೆ ಅಪಾಯ ಉಂಟಾಗುತ್ತಿತ್ತು.

ಟಿಪ್ಪರ್ ತುಂಬಾ ಮರಳು ಇದ್ದು, ಅಪಘಾತದಿಂದ ರಸ್ತೆಯಲ್ಲೆಲ್ಲಾ ಮರಳು ಚೆಲ್ಲಿತ್ತು. ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾದರೂ ಬಳಿಕ ಬಂಟ್ವಾಳ ಟ್ರಾಫಿಕ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಹಜರು ಕಾರ್ಯ ಕೈಗೊಂಡರು.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ