ಬಂಟ್ವಾಳ

ಹರಿಶೇಖರನ್ ಟ್ರಾನ್ಸ್ ಫರ್, ಹೇಮಂತ್ ನಿಂಬಾಳ್ಕರ್ ಐಜಿಪಿ

ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಪಿ.ಹರಿಶೇಖರನ್ ವರ್ಗಾವಣೆಗೊಂಡಿದ್ದಾರೆ. ಅವರನ್ನು ಬೆಂಗಳೂರು ಕೇಂದ್ರ ಕಚೇರಿಗೆ ಐಜಿಪಿಯಾಗಿ ವರ್ಗಾವಣೆ ಮಾಡಿ ಸರಕಾರ ಆ.7ರಂದು ಆದೇಶ ಹೊರಡಿಸಿದೆ. ಹೇಮಂತ್ ನಿಂಬಾಳ್ಕರ್  ಪಶ್ಚಿಮ ವಲಯ ಐಜಿಪಿಯಾಗಿ ನಿಯುಕ್ತಿಗೊಳಿಸಲಾಗಿದೆ.

ಜಾಹೀರಾತು

ಕಲ್ಲಡ್ಕದಲ್ಲಿ ನಡೆದ ಅಹಿತಕರ ಘಟನೆಗಳ ನಂತರ ನಡೆದ ಪ್ರಮುಖ ವರ್ಗಾವಣೆಗಳ ಸಾಲಿಗೆ ಇದೂ ಸೇರಿಕೊಳ್ಳುತ್ತದೆ. ಇಲ್ಲಿಯವರೆಗೆ ಎಸ್ಪಿ ಭೂಷಣ್ ಜಿ.ಬೊರಸೆ, ಅಡಿಶನಲ್ ಎಸ್ಪಿ ವೇದಮೂರ್ತಿ, ಡಿವೈಎಸ್ಪಿ ರವೀಶ್ ಸಿ.ಆರ್ ಅವರನ್ನು ವರ್ಗಾವಣೆಗೊಳಿಸಲಾಗಿತ್ತು.

ಚನ್ನಬಸಪ್ಪ ಲಂಗೋಟಿ .. ಎಡಿಶನಲ್ ಎಸ್ಪಿ

ದಕ್ಷಿಣ ಕನ್ನಡ ಹೆಚ್ಚುವರಿ ಪೊಲೀಸ್ ಅಕ್ಷಕರನ್ನಾಗಿ ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಎಸ್ಪಿಯಾಗಿರುವ ಚನ್ನಬಸಪ್ಪ ಲಂಗೋಟಿ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಆಗಸ್ಟ್ ೪ರಂದು ಅಸೂಚನೆಯನ್ನು ರಾಜ್ಯ ಸರಕಾರ ಹೊರಡಿಸಿದ್ದು, ಒಟ್ಟು 10 ಮಂದಿಯನ್ನು ನಾನಾ ಕಡೆ ವರ್ಗಾಯಿಸಲಾಗಿದೆ. ಎಡಿಶನಲ್ ಎಸ್ಪಿ ವೇದಮೂರ್ತಿ ಬದಲಿಗೆ ಬಂದ ವಿಷ್ಣುವರ್ಧನ ಅವರೂ ವರ್ಗಾವಣೆ ಹೊಂದಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.