ಬಂಟ್ವಾಳ

ಮೊಟ್ಟೆಯೊಡೆದು ಬಂದವು ಹೆಬ್ಬಾವಿನ ಮರಿಗಳು

Pic: Nithyaprakash Bantwal

www.bantwalnews.com


ಸುಮಾರು ಒಂದು ತಿಂಗಳು ಕೃತಕ ಕಾವು ಕೊಟ್ಟ ಬಳಿಕ ಹೊರಬಂದವು ಹೆಬ್ಬಾವಿನ ಹದಿನೈದು ಮರಿಗಳು. ಇವೀಗ ಆರೋಗ್ಯವಾಗಿದ್ದು, ಪಶ್ಚಿಮ ಘಟ್ಟದ ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಸ್ವತಂತ್ರವಾಗಿ ವಿಹರಿಸುತ್ತಿವೆ.

Pic: Nithyaprakash Bantwal

ಒಂದು ತಿಂಗಳ ಹಿಂದೆ ಬಂಟ್ವಾಳ ಸಮೀಪದ ಬಡಗುಂಡಿ ಎಂಬಲ್ಲಿ ದೊರಕಿದ ಹೆಬ್ಬಾವಿನ ಮೊಟ್ಟೆಗಳನ್ನು ರಕ್ಷಿಸಿ, ಅದರಿಂದ ಮರಿಗಳು ಹೊರಬಂದ ಕತೆ ಇದು. ಬಡಗುಂಡಿಯಲ್ಲಿ ನಿವೇಶನ ನಿರ್ಮಾಣ ವೇಳೆ ಅಲ್ಲಿನ ಕೆಲಸಗಾರರಿಗೆ ಹೆಬ್ಬಾವಿನ ಮೊಟ್ಟೆಗಳು ಕಂಡುಬಂದವು. ಕೂಡಲೇ ಅವುಗಳನ್ನು ಉರಗತಜ್ಞ ಸ್ನೇಕ್ ಕಿರಣ್ ಮತ್ತು ತಂಡದ ಸದಸ್ಯರಾದ ನಿತ್ಯಪ್ರಕಾಶ್ ಬಂಟ್ವಾಳ್, ಶ್ರೀಪ್ರಸಾದ್, ಅಜಯ್, ಥೋಮಸ್, ಅವಿನ್ ಅವರಿಗೆ ಒಪ್ಪಿಸಿದರು. ಸ್ನೇಕ್ ಕಿರಣ್ ಇದನ್ನು ಸುಮಾರು ಒಂದು ತಿಂಗಳು ಕೃತಕವಾಗಿ ಕಾವು ಕೊಡುವ ವ್ಯವಸ್ಥೆ ಮೂಲಕ ಸಂರಕ್ಷಿಸಿದರು. ಮೊಟ್ಟೆಯೊಳಗಿನಿಂದ ಸುರಕ್ಷಿತವಾಗಿ ಹೆಬ್ಬಾವಿನ ಮರಿಗಳು ಹೊರಗೆ ಬಂದಿದ್ದು, ಆ ಮರಿಗಳನ್ನು ಸುಮಾರು ೧೦ ದಿನಗಳ ಕಾಲ ಆರೈಕೆ ಮಾಡಿ ಅರಣ್ಯ ಇಲಾಖೆಯ ಆರ್.ಎಫ್.ಬಿ. ಸುರೇಶ್, ಡಿ.ಆರ್.ಎಫ್. ಲಕ್ಷ್ಮೀನಾರಾಯಣ ಮತ್ತು ಡಿ.ಆರ್.ಎಫ್. ಅನಿಲ್ ಅವರ ಸಹಾಯದೊಂದಿಗೆ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಿಗೆ ಬಿಡಲಾಯಿತು.

ಜಾಹೀರಾತು

pic: Nithyaprakash Bantwal

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.