ಬಂಟ್ವಾಳ

ಪ್ರಚೋದನಕಾರಿ ಸಂದೇಶ: ಎರಡು ಪ್ರಕರಣ ದಾಖಲು

ಸುಜಿತ್ ಬಂಗೇರ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಜೂನ್ 17ರಂದು ಪ್ರಚೋದನಕಾರಿ ಸಂದೇಶ ಪ್ರಸಾರ ಮಾಡಿದ ಕುರಿತು ಹಾಗೂ ಉಸ್ಮಾನ್ ಅಭಿಮಾನಿಗಳ ಬಳಗ ಎಂಬ ಹೆಸರಿನಲ್ಲಿ ಸಮೀಹ ಸಲ್ಮಿ ಎಂಬ ಹೆಸರಿನ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಪ್ರಸಾರ ಮಾಡಿದ ಕುರಿತು ಐಪಿಸಿ ಕಲಂ 505(ಸಿ)(1)ರಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಾಹೀರಾತು

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ಪ್ರಸಾರ ಮಾಡಬಾರದಾಗಿ ಕೋರಲಾಗಿದೆ. ಇಂಥ ಸಂದೇಶಗಳನ್ನು ಕಳುಹಿಸಿದಲ್ಲಿ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ನಿಮ್ಮ ಮೊಬೈಲ್ ಗೆ ಪ್ರಚೋದನಕಾರಿ ಸಂದೇಶ ಬಂದಲ್ಲಿ ಅದರ ಸ್ಕ್ರೀನ್‌ಶಾಟ್ ತೆಗೆದು 9480800941 ಅಥವಾ 9480805300ಗೆ ಫಾರ್ವರ್ಡ್ ಮಾಡಲು ಪೊಲೀಸರು ವಿನಂತಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಭೂಷಣ್ ಜಿ. ಬೊರಸೆ ಕಲ್ಲಡ್ಕದಲ್ಲಿ ನಡೆದ ಶಾಂತಿಸಭೆಯಲ್ಲಿ ಹೇಳಿಕೆ ನೀಡಿ, ಪ್ರಚೋದನಕಾರಿ ಸಂದೇಶ ಹರಡುವುದೂ ಅಪರಾಧ, ಅದರ ವಿರುದ್ಧ ದೂರು ನೀಡಿ ಎಂದಿದ್ದರು. ಅದರ ಪಶ್ಚಾತ್ ಪರಿಣಾಮವಾಗಿ ಎರಡು ಪ್ರಕರಣಗಳು ಬಂಟ್ವಾಳ ನಗರ ಠಾಣೆಯಲ್ಲಿ ಮಂಗಳವಾರ ದಾಖಲಾಗಿದೆ.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.