ವಾಮದಪದವು

ನೀರಿನ ಮೂಲ ವರ್ಧಿಸುವ ಕಾರ್ಯ ಅಗತ್ಯ: ಮಂಜು ವಿಟ್ಲ

ಮುಂದಿನ ಕಾಲಕ್ಕೆ ನಾವು ನೀಡಬಹುದಾದ ಏಕೈಕ ಸಂಪತ್ತು ನೀರು. ಹಾಗಾಗಿ ನೀರಿನ ಮೂಲವನ್ನು ವೃದ್ಧಿಸುವ, ಉಳಿಸುವ ಕಾರ್ಯ ಇಂದಿನಿಂದಲೇ ನಡೆಯಬೇಕೆಂದು ರಾಜ್ಯ ತರಬೇತುದಾರ ಮಂಜು ವಿಟ್ಲ ಅವರು ಹೇಳಿದರು.

ಜಾಹೀರಾತು

ಕೇಂದ್ರ ಸರಕಾರದ ದತ್ತೋಪಂತ್ ಥೇಂಗಡಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿಯ ಮಂಗಳೂರು ವತಿಯಿಂದ ರಾಯಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ 2 ದಿನಗಳ ಅಸಂಘಟಿತ ಕಾರ್ಮಿಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನದಿ, ಕೆರೆ, ಬಾವಿಗಳು ಬತ್ತಿ ಹೋಗಿದ್ದು, ನಾವಿಂದು ನಳ್ಳಿ ನೀರಿಗೆ ಅವಲಂಭಿತರಾಗಿದ್ದೇವೆ. ಇದೊಂದು ಅಪಾಯದ ಸೂಚನೆವಾಗಿದ್ದು, ಸಾರ್ವಜನಿಕ ಕೆರೆಗಳನ್ನು ಸಂರಕ್ಷಿಸುವ ಪ್ರಯತ್ನ ಸಾಮೂಹಿಕವಾಗಿ ನಡೆದಾಗ ಸ್ವಾಭಾವಿಕವಾದ ಜಲ ಮೂಲ ವೃದ್ಧಿಯಾಗುತ್ತದೆ ಎಂದವರು ತಿಳಿಸಿದರು.

ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿಯ ಪ್ರಾದೇಶಿಕ ಕಾರ್ಮಿಕ ಶಿಕ್ಷಣಾಧಿಕಾರಿ ಎ.ಸತೀಶ್ ಕುಮಾರ್ ಅವರು ಕಾರ್ಮಿಕರ ಹಕ್ಕು, ಅಧಿಕಾರಗಳನ್ನು ವಿವರಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಅವರು ಮಾತನಾಡಿ, ಸರಕಾರದ ಯೋಜನೆ, ಸವಲತ್ತು, ಕಾರ್ಯಕ್ರಮ ಯಶಸ್ವಿಯಾಗ ಬೇಕಾದರೆ, ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದರು. ಮಹಿಳೆಯರ ಹಾಗೂ ಮಕ್ಕಳ ಅಧಿಕಾರ, ಹಕ್ಕು, ಸ್ವಾತಂತ್ರ್ಯ, ಶಿಕ್ಷಣ ಕುರಿತು ಸಂವಾದ ನಡೆಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.