ಬಂಟ್ವಾಳ

ವಿಷ ಸೇವಿಸಿ ಅಡಕೆ ವ್ಯಾಪಾರಿ ಆತ್ಮಹತ್ಯೆ

www.bantwalnews.com report

ಬಂಟ್ವಾಳದ ಬಿ.ಸಿ.ರೋಡ್ ಸಮೀಪ ಕಂಚುಕಾರಪೇಟೆ ನೇತ್ರಾವತಿ ಸೇತುವೆ ಬಳಿ ಅಡಕೆ ವ್ಯಾಪಾರಿ ಮನೋಹರ ಶೆಟ್ಟಿ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂದಿನಂತೆ ಬೈಪಾಸಿನ ಮನೆಯೊಂದಕ್ಕೆ ಬೆಳಗ್ಗೆ ಹಾಲು ಕೊಟ್ಟ ಬಳಿಕ ನಂದಾವರ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದ ಮನೋಹರ್, ಸಂಜೆಯಾದರೂ ಮರಳಲಿಲ್ಲ. ಇದರಿಂದ ಆತಂಕಿತರಾದ ಮನೆಯವರು ಗೆಳೆಯರ ಬಳಿ ವಿಚಾರಿಸಿದಾಗ, ಹುಡುಕಾಟ ನಡೆಸಲಾಯಿತು. ಸಂಜೆ ಹೊತ್ತಿಗೆ ಅವರ ಬೈಕ್ ಕಂಚುಕಾರಪೇಟೆ ನೇತ್ರಾವತಿ ಸೇತುವೆ ಬಳಿ ಕಂಡುಬಂತು. ಪಕ್ಕದಲ್ಲೇ ಶವ ಇತ್ತು. ಅದರೊಂದಿಗೆ ಡೆತ್ ನೋಟ್ ಬರೆದಿಟ್ಟಿದ್ದ ಮನೋಹರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಐದು ವರ್ಷಗಳ ಹಿಂದೆ ಅವರ ತಮ್ಮ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಅವಿವಾಹಿತರಾಗಿದ್ದ ಮನೋಹರ್, ಸ್ನೇಹಜೀವಿಯಾಗಿದ್ದು, ತನ್ನ ಸರಳ ನಡೆ, ನುಡಿಯಿಂದ ಜನಾನುರಾಗಿಯಾಗಿದ್ದರು. ಬಂಟ್ವಾಳ ಎಸ್.ವಿ.ಎಸ್.ಕಾಲೇಜು ಬಳಿಯ ಕಂಚಿಲ್ದಗದ್ದೆ ನಿವಾಸಿಯಗಿರುವ ಅವರ ಶವ ಮಹಜರು ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಈ ಸಂದರ್ಭ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಸಾಗಿದೆ.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.