www.bantwalnews.com report
ಬಂಟ್ವಾಳದ ಬಿ.ಸಿ.ರೋಡ್ ಸಮೀಪ ಕಂಚುಕಾರಪೇಟೆ ನೇತ್ರಾವತಿ ಸೇತುವೆ ಬಳಿ ಅಡಕೆ ವ್ಯಾಪಾರಿ ಮನೋಹರ ಶೆಟ್ಟಿ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂದಿನಂತೆ ಬೈಪಾಸಿನ ಮನೆಯೊಂದಕ್ಕೆ ಬೆಳಗ್ಗೆ ಹಾಲು ಕೊಟ್ಟ ಬಳಿಕ ನಂದಾವರ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದ ಮನೋಹರ್, ಸಂಜೆಯಾದರೂ ಮರಳಲಿಲ್ಲ. ಇದರಿಂದ ಆತಂಕಿತರಾದ ಮನೆಯವರು ಗೆಳೆಯರ ಬಳಿ ವಿಚಾರಿಸಿದಾಗ, ಹುಡುಕಾಟ ನಡೆಸಲಾಯಿತು. ಸಂಜೆ ಹೊತ್ತಿಗೆ ಅವರ ಬೈಕ್ ಕಂಚುಕಾರಪೇಟೆ ನೇತ್ರಾವತಿ ಸೇತುವೆ ಬಳಿ ಕಂಡುಬಂತು. ಪಕ್ಕದಲ್ಲೇ ಶವ ಇತ್ತು. ಅದರೊಂದಿಗೆ ಡೆತ್ ನೋಟ್ ಬರೆದಿಟ್ಟಿದ್ದ ಮನೋಹರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಐದು ವರ್ಷಗಳ ಹಿಂದೆ ಅವರ ತಮ್ಮ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಅವಿವಾಹಿತರಾಗಿದ್ದ ಮನೋಹರ್, ಸ್ನೇಹಜೀವಿಯಾಗಿದ್ದು, ತನ್ನ ಸರಳ ನಡೆ, ನುಡಿಯಿಂದ ಜನಾನುರಾಗಿಯಾಗಿದ್ದರು. ಬಂಟ್ವಾಳ ಎಸ್.ವಿ.ಎಸ್.ಕಾಲೇಜು ಬಳಿಯ ಕಂಚಿಲ್ದಗದ್ದೆ ನಿವಾಸಿಯಗಿರುವ ಅವರ ಶವ ಮಹಜರು ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಈ ಸಂದರ್ಭ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಸಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…